ದಕ್ಷಿಣ ಕನ್ನಡ: ಮೇ 14ರಂದು ಭಾನುವಾರ ಗೂಡ್ಸ್ ರೈಲಿಗೆ 17 ಎಮ್ಮೆಗಳು ಸಾವನ್ನುಪ್ಪಿರುವ ಘಟನೆ ನಡೆದಿದೆ.
ಹೌದು, ರೈಲು ಡಿಕ್ಕಿಯಾಗಿ 15 ಕ್ಕೂ ಹೆಚ್ಚು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರಿನ ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ತಡರಾತ್ರಿ ಕಾರ್ಯಾಚರಣೆ ನಡೆಸಿ ಹಳಿ ಬಳಿಯ ಎಮ್ಮೆಗಳ ಮೃತದೇಹಗಳನ್ನು ತೆರವು ಮಾಡಿದ್ದಾರೆ.
ಈ ಸಂದರ್ಭ ನಾಲ್ಕು ಎಮ್ಮೆಗಳನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ ರೈಲ್ವೆ ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಕಂಕನಾಡಿ ಕಡೆಯಿಂದ ಎಂಸಿಎಫ್ಕಡೆಗೆ ಗೂಡ್ಸ್ ರೈಲು ಬರುತ್ತಿತ್ತು. ರೈಲಿನ ಶಬ್ಧದಿಂದ ಭಯಗೊಂಡು ಎಮ್ಮೆಗಳು ರೈಲು ಬ್ರಿಡ್ಜ್ ಮೇಲೆ ಓಡಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಅಥವಾ ಗೂಡ್ಸ್ ರೈಲು ಸಾಗುವ ಸಂದರ್ಭದಲ್ಲಿ ಹಾರ್ನ್ ಶಬ್ದವೂ ಎಮ್ಮೆಗಳಿಗೆ ಕೇಳಿಸಿಲ್ಲವೋ ಅಥವಾ ಕೇಳಿಸುವ ಹೊತ್ತಿನಲ್ಲಿ ರೈಲು ಹಾಯ್ದು ಹೋಯಿತೋ ತಿಳಿದುಬಂದಿಲ್ಲ.