ಬೂತ್ ಅಧ್ಯಕ್ಷರರಿಗೆ ನಾಮಫಲಕ

ಬೂತ್ ಅಧ್ಯಕ್ಷರರಿಗೆ ನಾಮಫಲಕ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರು ಶ್ರೀ ಎಂ. ಸತೀಶ್‌ರೆಡ್ಡಿ ರವರ ನೇತೃತ್ವದಲ್ಲಿ ಶನಿವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರರಿಗೆ ನಾಮಫಲಕ ವಿತರಣಾ ಕಾರ್ಯಕ್ರಮ, ಕಾರ್ಯಕರ್ತರ ವಿಶೇಷ ಸಭೆ ನಡೆಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಆನಂದ್ ರವರು, ಸೈಯದ್ ಸಲಾಂ ಅಣ್ಣನವರು ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳು, ಶ್ರೀ ಶಿವಪ್ಪ ಅವರು ಬೆಂ. ದ. ಜಿ. ಉಪಾಧ್ಯಕ್ಷರು ಮತ್ತು ಬೊಮ್ಮನಹಳ್ಳಿ ಮಂಡಲದ ಪ್ರಭಾರಿಗಳು, ಶ್ರೀ ರಾಮ್ ಮೋಹನ್ ರಾಜು ಅವರು, ಶ್ರೀ ಶಿವಾಜಿ ರವರು ಬೊಮ್ಮನಹಳ್ಳಿ ಮಂಡಲದ ಅಧ್ಯಕ್ಷರು, ಶ್ರೀ ಅನಿಲ್ ಕುಮಾರ್ ಬೊಮ್ಮನಹಳ್ಳಿ ಮಂಡಲದ ಪ್ರಧಾನ ಕಾರ್ಯದರ್ಶಿಗಳು, ಶ್ರೀ ಮಂಜುನಾಥ್ ರೆಡ್ಡಿಯವರು ಮಾಜಿ ಬಿಬಿಎಂಪಿ ಸದಸ್ಯರು ಮತ್ತು ಮಾಜಿ ಹೆಲ್ತ್ ಚೇರ್ಮನ್, ಮಾಜಿ ಬಿಬಿಎಂಪಿ ಸದಸ್ಯರು,  ಮಾಜಿ ಉಪ ಮಹಾಪೌರರು, ಶ್ರೀ ಮಾಲಾ ಶ್ರೀನಿವಾಸ್ ರೆಡ್ಡಿ ಅಣ್ಣನವರು ಬಿಜೆಪಿ ಮುಖಂಡರು, ಶ್ರೀಮತಿ ಭಾರತಿ ರಾಮಚಂದ್ರ ರವರು ಬೊಮ್ಮನಹಳ್ಳಿ ಮಂಡಲ ಮಹಿಳಾಮೋರ್ಚಾ ಅಧ್ಯಕ್ಷರು, ಎಲ್ಲಾ ವಾರ್ಡ್‍ಗಳ  ಮಾಜಿ ಬಿಬಿಎಂಪಿ ಸದಸ್ಯರುಗಳು, ಎಲ್ಲಾ ವಾರ್ಡ್‍ಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಬೂತ್ ಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಎಸ್ಸಿ ಮೋರ್ಚಾ, ಓಬಿಸಿ ಮೋರ್ಚಾ, ಮಹಿಳಾ ಮೋರ್ಚಾ, ಯುವ ಮೋರ್ಚಾದ ಪದಾಧಿಕಾರಿಗಳು, ಮತ್ತು ಕಾರ್ಯಕರ್ತರು ಬೊಮ್ಮನಹಳ್ಳಿ ಮಂಡಲ ಮಹಿಳಾಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಮಹೇಶ್ವರಿ ಜಗಧೀಶ್ ರವರು ಮತ್ತು ಪ್ರಶಾಂತಿನಿ ಬಿ.ಜೆ ರವರು, ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Related