ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ʻವೆಂಕಯ್ಯ ನಾಯ್ಡುʼ ಅವರಿಗೆ ಬೀಳ್ಕೊಡುಗೆ

  • In State
  • August 8, 2022
  • 245 Views
ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ʻವೆಂಕಯ್ಯ ನಾಯ್ಡುʼ ಅವರಿಗೆ ಬೀಳ್ಕೊಡುಗೆ

ನವದೆಹಲಿ ಆ8: ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು  ಅವರಿಗೆ ಇಂದು ಸದನದಲ್ಲಿ ಬೀಳ್ಕೊಡುಗೆ ನೀಡಲಾಗುವುದು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಉನ್ನತ ನಾಯಕರು ಉಪಸ್ಥಿತರಿರಲಿದ್ದಾರೆ.

ನಾಯ್ಡು ಅವರು ಬುಧವಾರ ಅಧಿಕಾರದಿಂದ ನಿರ್ಗಮಿಸುತ್ತಾರೆ ಮತ್ತು ಅವರ ಉತ್ತರಾಧಿಕಾರಿ ಜಗದೀಪ್ ಧನಕರ್ ಅವರು ಆಗಸ್ಟ್ 11 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುಹರಂ ಮತ್ತು ರಕ್ಷಾ ಬಂಧನದ ನಿಮಿತ್ತ ಮಂಗಳವಾರ ಮತ್ತು ಗುರುವಾರ ಸದನದ ಸಭೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಇಂದು ಸಂಜೆ ಜಿಎಂಸಿ ಬಾಲಯೋಗಿ ಆಡಿಟೋರಿಯಂನಲ್ಲಿ ಸದನದ ಎಲ್ಲ ಸದಸ್ಯರ ಪರವಾಗಿ ನಾಯ್ಡು ಅವರಿಗೆ ಮತ್ತೊಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಪ್ರಧಾನ ಮಂತ್ರಿಗಳು ನಾಯ್ಡು ಅವರಿಗೆ ಸ್ಮರಣಿಕೆಯನ್ನು ನೀಡಲಿದ್ದು, ರಾಜ್ಯಸಭೆಯ ಉಪಾಧ್ಯಕ್ಷರು ಬೀಳ್ಕೊಡುಗೆ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.

ನಾಯ್ಡು ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾಗಿದ್ದ ಅವಧಿಯನ್ನು ವಿವರಿಸುವ ಪ್ರಕಟಣೆಯನ್ನು ಪ್ರಧಾನ ಮಂತ್ರಿ ಬಿಡುಗಡೆ ಮಾಡುತ್ತಾರೆ. ಇದರ ನಂತರ ಭೋಜನ ನಡೆಯಲಿದೆ.

Related