ಪ್ರಮಾಣಿಕರ ಮೇಲೆ ದಾಳಿ ಮಾಡಿದ್ರೆ ಉಳಿಯಲ್ಲ – ಚಂದ್ರಶೇಖರ್

ಪ್ರಮಾಣಿಕರ ಮೇಲೆ ದಾಳಿ ಮಾಡಿದ್ರೆ ಉಳಿಯಲ್ಲ – ಚಂದ್ರಶೇಖರ್

ದಾವಣಗೆರೆ,ಜುಲೈ 21 : “ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ನಾನೇ. ಸಂಘದಿಂದ ಹೊರ ಹಾಕಿದವರು ಕುತಂತ್ರ ಮಾಡಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ನಮ್ಮ ಜೊತೆಗಿದ್ದಾರೆ. ಜಿಲ್ಲಾಧ್ಯಕ್ಷರು ಅವರ ಬೆಂಬಲಕ್ಕಿಲ್ಲ” ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಳಿಗೊಂದು ಕಲ್ಲು ಎಂಬಂತೆ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಕೆಲವರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಪ್ರಾಮಾಣಿಕ ವ್ಯಕ್ತಿ ಮೇಲೆ ದಾಳಿ ಮಾಡಿದರೆ ಉಳಿಯೋದಿಲ್ಲ” ಎಂದು ಕೋಡಿಹಳ್ಳಿ ಚಂದ್ರಶೇಖರ್ ಗುಡುಗಿದರು.

ವಿದ್ಯಾರ್ಥಿ ದೆಸೆಯಲ್ಲಿ ಎಷ್ಟು ಕ್ರಿಯಾಶೀಲನಾಗಿದ್ದೇನೋ ಈಗಲೂ ಅಷ್ಟೇ ಸಕ್ರಿಯವಾಗಿದ್ದೇನೆ . ನಮಗೂ ಜವಾಬ್ದಾರಿ ಇದೆ. ಸಂಘವನ್ನುಮುನ್ನೆಡೆಸಿಕೊಂಡು ಹೋಗುವ ಶಕ್ತಿ ಇದೆ” ಎಂದು ಹೇಳಿದರು. “ಹೆಚ್. ಆರ್. ಬಸವರಾಜಪ್ಪ ಸೇರಿದಂತೆ ಕೆಲವರನ್ನು 1998ರಲ್ಲಿಯೇ ಪ್ರೊ. ನಂಜುಂಡಸ್ವಾಮಿ ಬಣದಿಂದ ಕಿತ್ತು ಹಾಕಲಾಗಿದೆ. ನಂಜುಂಡಸ್ವಾಮಿ ಬಣದ ಅಧ್ಯಕ್ಷನಾಗಿ ಅಂದಿನಿಂದಲೂ ಮುಂದುವರಿದಿದ್ದೇನೆ. ಈಗಲೂ ನಾನೇ ಅಧ್ಯಕ್ಷ. ನಾವು ಹೊರಹಾಕಿದವರು ಈಗ ಅಧ್ಯಕ್ಷ ಎನ್ನಲು ಅವರ ಜೊತೆ ಜಿಲ್ಲಾಧ್ಯಕ್ಷರು ಇದ್ದಾರೆಯೇ?” ಎಂದು ಹೇಳಿದರು.

Related