ಹಾಡುಹಗಲೇ ರಸ್ತೆಗಿಳಿದ ಗಜರಾಜರು

  • In State
  • April 5, 2020
  • 562 Views
ಹಾಡುಹಗಲೇ ರಸ್ತೆಗಿಳಿದ ಗಜರಾಜರು

ಕೊಡಗು, ಏ. 05: ಕೊಡಗಿನ ಜನತೆಗೆ ಕೊರೊನಾ ಭೀತಿ ಬೆನ್ನಲ್ಲೇ ಕಾಡಾನೆಗಳ ಹಾವಳಿಯೂ ತಟ್ಟಿದೆ. ಹೌದು, ವಿರಾಜಪೇಟೆ ಸಮೀಪದ ಅರಣ್ಯದಂಚಿನಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಆಸುಪಾಸಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ವೀರಾಜಪೇಟೆ ಸಮೀಪದ ಮಲ್ದಾರೆ ಅರಣ್ಯ ಪ್ರದೇಶದ ಗ್ರಾಮಗಳ ಆಸುಪಾಸಿನಲ್ಲಿ ಸುಮಾರು ಐದಾರು ಕಾಡಾನೆಗಳಿದ್ದ ಹಿಂಡು ರಸ್ತೆಗಿಳಿದಿವೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ನಾಗರಿಕರು ಮನೆಗಳಿಂದ ಹೊರಬರದಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಅರಣ್ಯದಂಚಿನ ಗ್ರಾಮಗಳಲ್ಲೂ ಜನತೆಗೆ ಎಚ್ಚರ ವಹಿಸುವಂತೆ ಮಾಹಿತಿ ನೀಡಿದ್ದಾರೆ.

 

Related