ಸಿದ್ದಗಂಗಾ ಮಠಕ್ಕೂ ತಟ್ಟಿದ ಕೊರೋನಾ

  • In State
  • March 14, 2020
  • 343 Views
ಸಿದ್ದಗಂಗಾ ಮಠಕ್ಕೂ ತಟ್ಟಿದ ಕೊರೋನಾ

ತುಮಕೂರು, ಮಾ. 14 : ಇಲ್ಲಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 113ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಕೊರೋನಾ ಸೋಂಕಿನ ಕಾರಣದಿಂದ ಅನುಮತಿ ನೀಡಿಲ್ಲ. ಏ.5 ರಂದು ಶಿವಕುಮಾರ ಸ್ವಾಮೀಜಿಗಳ 113 ನೇ ಜಯಂತ್ಯುತ್ಸವ ಆಯೋಜಿಸಿದ್ದು, ಕೊರೋನಾ ಕಾರಣದಿಂದ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ರಾಜ್ಯದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಮಠದ ಮಕ್ಕಳನ್ನು ಊರಿಗೆ ಕಳಿಸಲಾಗುವುದು. ಮಠಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ ಎನ್ನಲಾಗಿದೆ.

Related