ಬೆಂಗಳೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕೊನೆಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ಬೋಸ್ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಿಂದ ಡಾ.ಮಹದೇವಪ್ಪ ಅವರೇ ಕಣಕ್ಕಿಳಿಯಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ಅವರ ಆಶಯವಾಗಿತ್ತು. ಆದರೆ, ಈ ಬಾರಿ ಲೋಕ ಸಮರಕ್ಕೆ ಸುನಿಲ್ ಬೋಸ್ ಅವರ ಹೆಸರು ಮೊದಲಿನಿಂದಲು ಮುಂಚುಣಿಯಲ್ಲಿತ್ತು. ಕೊನೆಗೆ ಹೈಕಮಾಂಡ ಅವರಿಗೆ ಮಣೆ ಹಾಕಿದೆ.