ಹಿರಿಯ ಪತ್ರಕರ್ತ ` ಸಾ.ಚ ‘ ನಿಧನ

ಹಿರಿಯ ಪತ್ರಕರ್ತ ` ಸಾ.ಚ ‘ ನಿಧನ

ಬೆಂಗಳೂರು : ಹಿರಿಯ ಪತ್ರಕರ್ತ ಎಸ್.ಚಂದ್ರಶೇಖರ್ ರಾವ್ ( ಸಾ.ಚ) ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧರಾಗಿದ್ದಾರೆ.
ಕನ್ನಡದ ಹಲವು ವಾರಪತ್ರಿಕೆ ಮತ್ತು ದೈನಿಕಗಳಲ್ಲಿ ಕೆಲಸ ಮಾಡಿದ್ದಾರೆ. ಹಿರಿಯ ಪತ್ರಕರ್ತ ಜಯಶೀಲರಾವ್ ಸಂಪಾದಕತ್ವದ ಮುಂಜಾನೆ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿದ್ದರು. ಅಭಿಮಾನಿ ಬಳಗವನ್ನು ಸೇರಿದ್ದರು. ರಾಜನ್ಸ್ ಬಳಗದಲ್ಲೂ ಕಾರ್ಯನಿರ್ವಹಿಸಿರುತ್ತಾರೆ. ಪತ್ರಕರ್ತರ ನಡುವೆ ಸಾ ಚ ಎಂದೇ ಜನಪ್ರಿಯಗೊಂಡಿದ್ದ ಅವರು ಕರ್ನಾಟಕ ಪ್ರಸಿದ್ಧ ಕ್ರೈಂ ವರದಿಗಾರರು ಕೂಡ ಆಗಿದ್ದರು.ಒಂದೆರಡು ದಿನಗಳ ಹಿಂದಷ್ಟೇ ತಮ್ಮ 75 ವರ್ಷದ ಹುಟ್ಟು ಹಬ್ಬವನ್ನು ಸಾ.ಚ ಆಚರಿಸಿಕೊಂಡಿದ್ದರು. ಪತ್ನಿ, ಪುತ್ರ, ಪುತ್ರಿ ಅಗಲಿದಿದ್ದಾರೆ.

Related