ಮೊಸಳೆಗೆ ಬಲಿಯಾದ ವಿದ್ಯಾರ್ಥಿ

ಮೊಸಳೆಗೆ ಬಲಿಯಾದ ವಿದ್ಯಾರ್ಥಿ

ಮುದ್ದೇಬಿಹಾಳ : ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಈಜಲು ಹೋದ ಯುವಕ ಮೊಸಳೆಯ ಪಾಲಾಗಿರುವ ಘಟನೆ ನಡೆದಿದೆ.

ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದ ಮಂಜುನಾಥ ಶಂಕ್ರಪ್ಪ ಹಳೇಗೌಡರ (16) ಎಂಬ 9ನೇ ತರಗತಿಯ ವಿದ್ಯಾರ್ಥಿ ಬಸವಸಾಗರ ಜಲಾಶಯದಲ್ಲಿ ಈಜಲು ತೆರಳಿ ಮೊಸಳೆ ಬಾಯಿಗೆ ಆಹಾರವಾಗಿದ್ದಾನೆ. ಇತ್ತ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಿತ್ತಾಪುರ ಗ್ರಾಮದ ಬಳಿ ಇರುವ ಜಲಾಶಯದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಈಜುವ ಸಮಯದಲ್ಲಿ ಏಕಾಏಕಿ ದಾಳಿ ಮಾಡಿದ ಮೊಸಳೆ ಬಾಲಕನನ್ನು ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಬಾಲಕನ ಶವಕ್ಕಾಗಿ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ನುರಿತ ಮೀನುಗಾರರೊಂದಿಗೆ  ಶೋಧಕಾರ್ಯ ನಡೆದಿದೆ. ಆದರೆ ಇಲ್ಲಿಯವರೆಗೂ ಬಾಲಕನ ಶವ ಪತ್ತೆಯಾಗಿಲ್ಲ.

 

 

Related