ಚಾಲೆಂಜಿಂಗ್‌ ಸ್ಟಾರ್‌ ವಿರುದ್ಧ ಓಪನ್‌ ಆಗುತ್ತಾ ರೌಡಿಶೀಟ್‌..?

ಚಾಲೆಂಜಿಂಗ್‌ ಸ್ಟಾರ್‌ ವಿರುದ್ಧ ಓಪನ್‌ ಆಗುತ್ತಾ ರೌಡಿಶೀಟ್‌..?

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್ ಅವರು ಈಗಾಗಲೇ ಪೊಲೀಸರ ಅತಿಥಿಯಾಗಿದ್ದಾರೆ. ನಟ ದರ್ಶನ್ ವಿರುದ್ಧ ರೌಡಿ ಶೀಟ್ ಓಪನ್ ಮಾಡಲು ಪೊಲೀಸ್ ಅಧಿಕಾರಿಗಳು ಚಿಂತನ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಕೊಲೆ ಪ್ರಕರಣದ ಆರೋಪಿ ಆಗಿರುವ ನಟ ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯಬೇಕೆಂಬ ಚರ್ಚೆ ನಡೆಯುತ್ತಿದೆ. ದರ್ಶನ್ ವಿರುದ್ಧ ದಾಖಲಾಗಿರುವ ಈ ಹಿಂದಿನ ಪ್ರಕರಣಗಳು, ದರ್ಶನ್​ರ ಸಾಮಾಜಿಕ ವ್ಯಕ್ತಿತ್ವ ಇನ್ನಿತರೆಗಳನ್ನು ಪರಿಗಣಿಸಿ ರೌಡಿ ಶೀಟ್ ತೆರೆಯುವ ಬೇಕೆನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ಹಿರಿಯ ಪೊಲೀಸರೊಟ್ಟಿಗೆ ಚರ್ಚಿಸಿ ನಿರ್ಣಯಿಸುವುದಾಗಿ ಸ್ವತಃ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಇದನ್ನೂ ಓದಿ: ಇನ್​ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ ದರ್ಶನ್ ಪತ್ನಿ

ಸಿಕ್ಕ ಸಿಕ್ಕ ವ್ಯಕ್ತಿಗಳ ಮೇಲೆಲ್ಲ ಪೊಲೀಸರು ರೌಡಿ ಶೀಟ್ ತೆರೆಯಲು ಸಾಧ್ಯವಿಲ್ಲ. ಪೊಲೀಸರು ಕೆಲವು ಮಾನದಂಡಗಳನ್ನು ಪಾಲಿಸಿಯೇ ರೌಡಿ ಶೀಟ್ ತೆರೆಯಬೇಕಾಗಿರುತ್ತದೆ. ವ್ಯಕ್ತಿಯೊಬ್ಬ ಸರಣಿ ಅಪರಾಧ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದರೆ, ಅಥವಾ ಆರೋಪಿತನಾಗಿ ಆತ ಮಾಡಿದ್ದಾನೆ ಎನ್ನಲಾಗುತ್ತಿರುವ ಕೃತ್ಯಗಳಿಗೆ ಪೊಟಿನ್ಶಿಯಲ್ ಎವಿಡೆನ್ಸ್​ಗಳಿದ್ದರೆ ಅಥವಾ ಗಲಭೆ, ಹಲ್ಲೆ ಇನ್ನಿತರೆ ಮಾದರಿಯ ದೂರುಗಳು ದಾಖಲಾಗಿ ಎನ್​ಸಿಆರ್​ಗಳು ದಾಖಲಾಗಿದ್ದರೆ ಅಂಥಹಾ ವ್ಯಕ್ತಿ ಸಮಾಜಕ್ಕೆ ಮಾರಕ ಎಂದು ಗುರುತಿಸಿ ಆತನ ವಿರುದ್ಧ ರೌಡಿ ಶೀಟ್ ತೆರೆಯಬಹುದು.

 

Related