ಕಾಗವಾಡ, ಏ. 01: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದ ಘಟನೆ ಕಾಗವಾಡದಲ್ಲಿ ಸಂಭವಿಸಿದೆ. ರಾಜಶ್ರೀ ಮೋಹನ ರಾಠೋಡ್(55) ಮೂಲತಾ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದವರು. ಕಳೇದ 3 ತಿಂಗಳಗಳಿಂದ ಕೆಲಸದ ನಿಮಿತ್ಯ ಕಾಗವಾಡಕ್ಕೆ ಬಂದಿದ್ದರು. ದಿ. 31 ರಂದು ಬೆಳಿಗ್ಗೆ ಬಟ್ಟೆ ತೊಳೆಯಲು ಹೋದಾಗ ಪವಾರ ಇವರ ಕಲ್ಲಿನ ಖನಿಯಾದ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಪತಿ, ನಾಲ್ಕು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ.
ಕಾಗವಾಡ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆ ಈ.ಆರ್.ಕರಜಗಿಮಠ, ಎಸ್.ವ್ಹಿ.ಪೂಜಾರಿ ದೂರು ದಾಖಲಿಸಿಕೊಂಡಿದ್ದು, ಪಿಎಸ್ಐ ಹನುಮಂತ ಶಿರಹಟ್ಟಿ ತನಿಖೆ ಕೈಗೊಂಡಿದ್ದಾರೆ.