ಮಹಾಮಂಡಳದ ಅಭ್ಯರ್ಥಿಗಳನ್ನು ಗೆಲ್ಲಿಸಿ

ಮಹಾಮಂಡಳದ ಅಭ್ಯರ್ಥಿಗಳನ್ನು ಗೆಲ್ಲಿಸಿ

ಗಜೇಂದ್ರಗಡ : ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘ ನಿಯಮಿತದ ನಿರ್ದೇಶಕ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ. ಗಜೇಂದ್ರಗಡ ಬಸ್ ಡೀಪೋದಲ್ಲಿ ಚುನಾವಣಾ ಪ್ರಚಾರಾತವಾಗಿ ಗೌರವ ಅಧ್ಯಕ್ಷ ರವಿಕಾಂತ ಪಾಟೀಲ ಅವರು ಚುನಾವಣಾ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಡಾ. ಕೆ.ಎಸ್ ಶರ್ಮಾಜಿ ಅವರ ನೇತೃತ್ವದಲ್ಲಿ ನೌಕರರ ಮಹಾಮಂಡಳದ ಅಭ್ಯರ್ಥಿಗಳನ್ನು ಬಹುಮತದಿಂದ ನೀವು ಚುನಾವಣೆಯಲ್ಲಿ ಅವರ ಗೆಲ್ಲುವಂತೆ ಮಾಡಬೇಕು. ಮಹಾ ಮಂಡಳದ ಎಲ್ಲಾ ಅಭ್ಯರ್ಥಿಗಳು ಸಿಬ್ಬಂದಿಗೆ ಯಾವೂದೇ ತೊಂದರೆಗಳು ಇದ್ದರೂ ಅದನ್ನು ಅವರು ಶೀಘ್ರವಾಗಿ ಬಗ್ಗೆ ಹರಿಸಿ ನಿಮ್ಮ ಸೇವೆಗೆ ಸದಾಕಾಲ ಇದೇ ಇರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಗದಗ ವಿಭಾಗದ ಅಧ್ಯಕ್ಷ ಎಚ್.ಬಿ ರಾಮೇನಹಳ್ಳಿ, ಪ್ರದಾನ ಕಾರ್ಯದರ್ಶಿ ಎಸ್.ಕೆ  ಅಯ್ಯನಗೌಡರ, ಎನ್.ಎ  ರಂಗ್ರೇಜ್, ಎಸ್.ಎಸ್ ಸುಕಂದ,  ಎಸ್.ಎಲ್  ಪಾಟೀಲ, ಎನ್.ಕೆ  ಘೋರ್ಪಡೆ,  ಎ.ಬಿ  ತಹಶೀಲ್ದಾರರ,  ಎಸ್.ಆರ್ ಜೂಜಾರೆ, ಪಿ.ಬಿ ರಾಯಬಾಗಿ, ಎ.ವಿ ಬಾಂಡಗೆ, ಹನಮಗೌಡ ಗೌಡರ, ಡಿ.ಎಲ್ ರಾಠೋಡ, ಮಂಜು ದಿಡ್ಡಿಮನಿ, ಎಮ್.ಎ ಹೊಸಮನಿ, ಎಸ್.ವಿ ಕಲ್ಲ್ಮಂಠ, ಎಮ್.ಎಚ್ ಗೊಲ್ಲರ ಸೇರಿದಂತೆ ಮತ್ತಿತರರು ಇದ್ದರು.

Related