ನಾವ್ಯಾರೂ ರಾಮನ ವಿರೋಧಿಗಳಲ್ಲ: ಸಚಿವ ನಾಗೇಂದ್ರ

ನಾವ್ಯಾರೂ ರಾಮನ ವಿರೋಧಿಗಳಲ್ಲ: ಸಚಿವ ನಾಗೇಂದ್ರ

ಬಳ್ಳಾರಿ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯವರು ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ.

ಕೇವಲ ಬಿಜೆಪಿ ಅವರಿಗೆ ರಾಮ ಸೀಮಿತನಲ್ಲ. ದೇಶದಲ್ಲಿರುವ ಎಲ್ಲಾ ಹಿಂದೂಗಳಿಗೂ ರಾಮನ ಪೂಜಿಸುವ ಅಧಿಕಾರವಿದೆ ಹಾಗಾಗಿ ನಾವು ಕೂಡ ರಾಮಭಕ್ತರೇ, ನಾವು ರಾಮನನ್ನು ವಿರೋಧಿಸುವುದಿಲ್ಲ ಆರಾಧಿಸುತ್ತೇವೆ ಎಂದು ಸಚಿವ ಬಿ ನಾಗೇಂದ್ರ ಅವರು ಹೇಳಿದ್ದಾರೆ.

ನಗರದಿಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ನಾಯಕರುಗಳು ರಾಮನ ಹೆಸರು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ಹೇಳಿದರು. ಬಿಜೆಪಿಯವರು ರಾಮಮಂದಿರ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಅನೇಕ ಸ್ವಾಮಿಗಳು ವಿರೋಧಿಸಿದ್ದಾರೆ. ಬಿಜೆಪಿಯವರು ಶ್ರೀರಾಮ ತಮಗೆ ಮಾತ್ರ ಸೀಮಿತ ಎಂಬಂತೆ ವರ್ತಿಸುತ್ತಿದ್ದಾರೆ. ನಾವ್ಯಾರೂ ರಾಮನ ವಿರೋಧಿಗಳಲ್ಲ. ಆದರೆ, ನಮಗೆ ವಾಲ್ಮೀಕಿ ಬಿಂಬಿತ ಶ್ರೀರಾಮಬೇಕೇ ವಿನಾ, ಬಿಜೆಪಿ ಬಿಂಬಿತ ಶ್ರೀರಾಮ ಅಲ್ಲ. ಶ್ರೀರಾಮ ಇಡೀ ಪ್ರಪಂಚದ ಆಸ್ತಿ ಹಾಗೆಯೇ ಕಾಂಗ್ರೆಸ್‌ನ ಆಸ್ತಿಯೂ ಹೌದು ಎಂದರು.

 

Related