ಪ್ರಾಣಿ ಪಕ್ಷಿಗಳಿಗೆ ನೀರು-ಮೇವಿಡುವುದರಲ್ಲಿ ತೃಪ್ತಿ

  • In State
  • March 23, 2020
  • 411 Views
ಪ್ರಾಣಿ ಪಕ್ಷಿಗಳಿಗೆ ನೀರು-ಮೇವಿಡುವುದರಲ್ಲಿ ತೃಪ್ತಿ

ಮಂಡ್ಯ, ಮಾ. 23 : ಸರ್ಕಾರಿ ಕೆಲಸವಿದೆ, ಅದನ್ನೇ ಮಾಡಿಕೊಂಡು ಹೋದರಾಯಿತು. ನಮಗ್ಯಾಕೆ ಊರ ಉಸಾಬರಿ ಎಂದು ಅಂದುಕೊಳ್ಳುವವರ ನಡುವೆ ಸದಾ ಒತ್ತಡದ ಕೆಲಸವಿದ್ದರೂ ಒಂದಷ್ಟು ಸಮಯವನ್ನು ಮೀಸಲಿಟ್ಟು ಪ್ರಾಣಿಪಕ್ಷಿಗಳ ಬಗ್ಗೆ ಕಾಳಜಿ ವಹಿಸುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ. ಅವರೇ ಪಿಡಿಒ ಎ.ಬಿ.ಶಶಿಧರ್.
ಜಿಲ್ಲೆಯ ಹಲಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಶಶಿಧರ್ ಪ್ರಾಣಿಪಕ್ಷಿ ಪ್ರಿಯರು. ಬೇಸಿಗೆ ಬರುತ್ತಿದ್ದಂತೆ ಎಲ್ಲೆಲ್ಲೂ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಪ್ರಾಣಿಪಕ್ಷಿಗಳ ಪಾಡು ಕೇಳುವವರಿಲ್ಲ. ಹೀಗಾಗೇ ಶಶಿಧರ್ ತಮ್ಮ ಕೈಲಾದ ಮಟ್ಟಿಗೆ ಪ್ರಾಣಿ ಪಕ್ಷಿಗಳಿಗೆ ಮೇವು, ನೀರು ನೀಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಬಗ್ಗೆ ಇನ್ನೊಂದಿಷ್ಟು ವಿವರ ಇಲ್ಲಿದೆ…
ಪ್ರಾಣಿ ಪಕ್ಷಿಗಳ ನೆರವಿಗೆ ನಿಲ್ಲುವ ಶಶಿಧರ್  ಬೇಸಿಗೆಯಲ್ಲಿ ಮೇವಿಲ್ಲದೇ ಪರದಾಡುವ ಪ್ರಾಣಿ ಪಕ್ಷಿಗಳು  ಸಾಮಾನ್ಯವಾಗಿ ಬೇಸಿಗೆ ದಿನಗಳು ಬರುತ್ತಿದ್ದಂತೆಯೇ ಎಲ್ಲ ಕಡೆಗಳ ಅರಣ್ಯ ಮತ್ತು ಅರಣ್ಯದಂಚಿನಲ್ಲಿರುವ ಪ್ರಾಣಿ ಪಕ್ಷಿಗಳು ಕುಡಿಯಲು ನೀರು ಮತ್ತು ತಿನ್ನಲು ಮೇವಿಲ್ಲದೆ ಪರದಾಡುತ್ತವೆ. ದೊಡ್ಡ ಪ್ರಾಣಿಗಳು ಎಲ್ಲೋ ಓಡಾಡಿ ಆಹಾರ ಹುಡುಕಿಕೊಂಡರೆ, ಅಳಿಲು, ಇನ್ನಿತರ ಪಕ್ಷಿಗಳು ತಿನ್ನಲು ಆಹಾರಕ್ಕೆ ಪರದಾಡುತ್ತವೆ. ಹೀಗಿರುವಾಗ ಅವುಗಳಿಗೆ ಆಹಾರ ನೀರು ಒದಗಿಸುವ ಮೂಲಕ ಅವುಗಳ ಉಳಿವಿಗೆ ಶ್ರಮ ಪಡುತ್ತಿದ್ದಾರೆ ಶಶಿಧರ್.

Related