ಹಿಂಸಾಚಾರ: 167 ಎಫ್ ಐಆರ್ ದಾಖಲು

ಹಿಂಸಾಚಾರ: 167 ಎಫ್ ಐಆರ್ ದಾಖಲು

ನವದೆಹಲಿ, ಮಾ. 01 : ಈಶಾನ್ಯ ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸದ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು ಜನರು ದಿನನಿತ್ಯದ ವ್ಯವಹಾರಕ್ಕೆ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಜನರ ಅಗತ್ಯ ಬಳಕೆಯ ವಸ್ತುಗಳ ಅಂಗಡಿಗಳು ನಿನ್ನೆಯಿಂದ ತೆರೆದಿವೆ. ಈ ಮಧ್ಯೆ ಭದ್ರತಾ ಪಡೆ ಯೋಧರ ಗಸ್ತು ತಿರುಗಾಟ ಪ್ರದೇಶದಲ್ಲಿ ಮುಂದುವರಿದಿದೆ. ಆದರೂ ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಮಾರ್ಚ್ 7ರವರೆಗೆ ಇನ್ನೊಂದು ವಾರ ಶಾಲಾ, ಕಾಲೇಜುಗಳು ಮುಚ್ಚಿರುತ್ತವೆ.ಆದರೆ 10 ಮತ್ತು 12ನೇ ತರಗತಿಯವರಿಗೆ ನಿಗದಿಯಾಗಿದ್ದ ಪರೀಕ್ಷೆ ನಾಳೆಯಿಂದ ನಡೆಯಲಿದೆ.
ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಸಿಬಿಎಸ್ ಇ ದೆಹಲಿ ಹೈಕೋರ್ಟ್ ನಲ್ಲಿ ಅಫಿಡವಿಟ್ಟು ಸಲ್ಲಿಸಿ ಪರೀಕ್ಷೆ ವೇಳೆ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿತ್ತು.

Related