ಸಿಎಂ ವಿರುದ್ಧ ವಾಟಾಳ್ ವಾಗ್ದಾಳಿ

ಸಿಎಂ ವಿರುದ್ಧ ವಾಟಾಳ್ ವಾಗ್ದಾಳಿ

ಹಾಸನ : ಡಿ. 5 ರಂದು ಬಂದ್ ವಿಚಾರವಾಗಿ ನಿರ್ಮಾಪಕ ಸಾ.ರಾ ಗೋವಿಂದ್ ಜೊತೆ ಸುದ್ದಿಗೋಷ್ಟಿ ನಡೆಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಜೈಲಿಗೆ ಹೋಗಿ ಬಂದರೂ ನಿಮಗೆ ಬುದ್ಧಿ ಬಂದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಸುಮ್ಮನೆ ಇರಬಾರದು. ರೈತ ಸಂಘಟನೆಗಳೂ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು. ಇದು ಕನ್ನಡಿಗರ ಹೋರಾಟ, ಎಲ್ಲರೂ ಬೆಂಬಲಿಸಬೇಕು. ಹೋರಾಟ ಆದಮೇಲೂ ಯಡಿಯೂರಪ್ಪ ಈ ಮರಾಠ ನಿಗಮ ವಾಪಸ್ ಪಡೆಯದಿದ್ದರೆ ಮತ್ತೆ ಉಗ್ರ ಹೋರಾಟ ನಡೆಬೇಕಾಗುತ್ತದೆ. ಎಂದು ಈ ವೇಳೆ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

Related