ಕಲ್ಲೂರ ರೊಡ್ ಗ್ರಾಮದಲ್ಲಿ ಉಡಿ ತುಂಬುವ ಕಾರ್ಯಕ್ರಮ

ಕಲ್ಲೂರ ರೊಡ್ ಗ್ರಾಮದಲ್ಲಿ ಉಡಿ ತುಂಬುವ ಕಾರ್ಯಕ್ರಮ

ಚಿಂಚೋಳಿ: ತಾಲ್ಲೂಕಿನ ಕಲ್ಲೂರ ರೊಡ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಧೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಅಡಿಯಲ್ಲಿ ಶ್ರಾವಣ ಮಾಸದ ವರಮಹಾಲಕ್ಷ್ಮೀ ಪೂಜೆಯ ಸಲುವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು.
ಒಕ್ಕೂಟ ಅಧ್ಯಕ್ಷ ನರಸಮ್ಮ ಲಕ್ಷ್ಮಣ ಆವುಂಟಿ, ಹಾಗೂ ಸಂಸ್ಥೆಯ ಯೋಜನಾಧಿಕಾರಿ ನಾಮದೇವ ದೇಶಪಾಂಡೆ ರವರು ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಘಟಕ ಅಧ್ಯಕ್ಷೆ ಲತಾಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ನಂತರ ಮಾತನಾಡಿದ ನರಸಮ್ಮ ಡಾ.ವೀರೇಂದ್ರ ಹೆಗಡೆ ಸಂಸ್ಥೆಯ ಯೋಜನೆ ಪ್ರತಿಯೊಬ್ಬರು ಪಡೆಯಲು ಕರೆ ನೀಡಿದರು.
ಮುಖ್ಯಾಥಿತಿಗಳಾಗಿ ಸ್ಥಳಿಯ ಗ್ರಾ.ಪಂ ಅದ್ಯಕ್ಷ .ಗೋಪಾಲ್, ಬೊವಿ ವಿಎಸ್‍ಎಸ್‍ಎನ್ ಅಧ್ಯಕ್ಷ ಚಂದ್ರಕಾಂತ ಜೊನ್ನಲ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನೀಲ್‍ಕುಮಾರ್ ಕಂಟಿ ಇನ್ನಿತರರಿದ್ದರು.

Related