ತ್ರಿವರ್ಣ ರಂಗಿನಿಂದ ಜಗಮಗಿಸುತ್ತಿರುವ ಕಂಠೀರವ ಕ್ರೀಡಾಂಗಣ

    ಬೆಂಗಳೂರು: ಇಂದು ದೇಶದಾದ್ಯಂತ 75ನೇ ಸ್ವತಂತ್ರ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಕಂಠೀರವ ಕ್ರೀಡಾಂಗಣವು ತ್ರಿವರ್ಣ ಬಣ್ಣದಿಂದ ಜವಮಂಗಿಸುತ್ತಿದೆ.

    ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಮರ್ಥ ಭಾರತ – ಅಮೃತ ಭಾರತಿಗೆ ಕರುನಾಡ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ಸಮಾರಂಭದಲ್ಲಿಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ, ಮಾಜಿ ಸಿಎಂ ಸದಾನಂದ ಗೌಡ, ಸಚಿವರಾದ ಆರ್ ಅಶೋಕ,  ಡಾ. ಅಶ್ವಥ ನಾರಾಯಣ,  ಸಂಸದರಾದ ಪಿ ಸಿ ಮೋಹನ್, ಲೆಹರ ಸಿಂಗ್, ಶಾಸಕರಾದ ಸುರೇಶ ಕುಮಾರ, ಅರವಿಂದ ಲಿಂಬಾವಳಿ,  ಸತೀಶ ರೆಡ್ಡಿ, ಕೃಷ್ಣಪ್ಪ, ಉದಯ ಗರುಡಾಚಾರ್, ಎನ್ ರವಿಕುಮಾರ, ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಮಂಜುನಾಥ ಉಪಸ್ಥಿತರಿದ್ದರು.

    Related