ಮೌಲ್ಯವಿಲ್ಲದ ಇಂದಿನ ರಾಜಕೀಯ : ಬೇಸರ

ಮೌಲ್ಯವಿಲ್ಲದ ಇಂದಿನ ರಾಜಕೀಯ : ಬೇಸರ

ಹುಬ್ಬಳ್ಳಿ : ಹಿಂದೆ ರಾಜಕೀಯವೆಂದರೆ ತತ್ವ, ಸಿದ್ಧಾಂತಗಳು, ದೂರದೃಷ್ಟಿ ಮತ್ತು ಜ್ಞಾನದ ಭಂಡಾರವೇ ತುಂಬಿರುತ್ತಿದ್ದವು. ಆದರೆ, ಈಗ ಮೌಲ್ಯಗಳೇ ಇಲ್ಲದ ರಾಜಕೀಯ ತುಂಬಿಕೊಂಡಿದೆ ಎಂದು ಮಾಜಿ ಮೇಯರ್ ಪಾಂಡುರಂಗ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಮೋಹನ ಏಕಬೋಟೆ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಮೂರನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ‘ಹುಬ್ಬಳ್ಳಿ-ಧಾರವಾಡ ರಾಜಕೀಯದಲ್ಲಿ ನೈತಿಕ ಮೌಲ್ಯಗಳು’ ವಿಷಯದ ಕುರಿತು ಉಪನ್ಯಾಸ ನೀಡಿ ‘ಈಗ ರಾಜಕೀಯದಲ್ಲಿ ಮೌಲ್ಯಗಳನ್ನು ಹುಡುಕಬೇಕಾಗಿದೆ. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು, ವ್ಯಕ್ತಿಗತವಾಗಿ ಮೌಲ್ಯಗಳನ್ನು ರೂಢಿಸಿಕೊಂಡರೆ ಆ ರಾಜಕಾರಣಿಗೆ ಸಿಗುವ ಗೌರವವೇ ಬೇರೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜೀವೇಶ್ವರ ಶಾಲೆಗೆ ಹೆಚ್ಚು ಅಂಕಗಳನ್ನು ಪಡೆದ ಪ್ರಿಯಾಂಕಾ ಬಸವಾ ಅವರನ್ನು ಸನ್ಮಾನಿಸಲಾಯಿತು.

Related