ಸಾರ್ವಜನಿಕ ಬದುಕಿನಲ್ಲಿ ಸರಿಯಾಗಿರಬೇಕು

ಸಾರ್ವಜನಿಕ ಬದುಕಿನಲ್ಲಿ ಸರಿಯಾಗಿರಬೇಕು

ಹುಬ್ಬಳ್ಳಿ : ಸಾರ್ವಜನಿಕ ಬದುಕಿನಲ್ಲಿದ್ದವರು ಸರಿಯಾಗಿ ಇರಬೇಕು ಎಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ನುಡಿದರು.

ಬಹಳ ದಿನದ ಹಿಂದೆಯೇ ತೆಗೆದುಕೊಳ್ಳಬೇಕು ಅಂದುಕೊಂಡಿದ್ದೆ. ಮಾಮೂಲಿ ಇಂಜೆಕ್ಷನ್‌ಗಿಂತ ಇದು ಚೆನ್ನಾಗಿದೆ. ಎಲ್ಲ ಜನರು ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ನಾನು ವಿನಂತಿ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶನಿವಾರ ಹೇಳಿದ್ದಾರೆ.

ದಂಪತಿ ಸಮೇತ ಕಿಮ್ಸ್ ಆಸ್ಪತ್ರೆಗೆ ಆಗಮಿಸಿ ಕೋವಿಡ್ ವ್ಯಾಕಿನ್ಸ್ ಲಸಿಕೆ ಪಡೆದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರಿ ನೌಕರರು ವ್ಯಾಕ್ಸಿನ್ ಪಡೆಯಬೇಕು. ಯಾವುದೇ ಹಿಂದೇಟು ಹಾಕಬಾರದು. ಈ ಬಗ್ಗೆ ಸದನದಲ್ಲಿ ಚರ್ಚೆ ಆದರೆ ನಾನು ಮಾತನಾಡುತ್ತೇನೆ ಎಂದಿದ್ದಾರೆ.

ಸದನದಲ್ಲಿ ಭದ್ರಾವತಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ವೈಯಕ್ತಿಕವಾಗಿ ಬಹಳ ನೋವಾಗಿದೆ. ಶಾಸಕರ ಸ್ಥಾನದಲ್ಲಿದ್ದವರು ಘನತೆಯಿಂದ ಇರಬೇಕು. ಸದನದ ಗೌರವ ಉಳಿಸಬೇಕು. ಕೆಲವು ವಿಷಯದಲ್ಲಿ ಸಮಾಧಾನದಿಂದ ವರ್ತಿಸಬೇಕು. ಸಭಾಪತಿ ಅಥವಾ ಸ್ಪೀಕರ್‌ಗೆ ಹೋಗಿ ಮನವಿ ಮಾಡಬೇಕು ಅದನ್ನ ಹೊರತುಪಡಿಸಿ ಈ ರೀತಿ ಮಾಡುವುದು ಸರಿ ಅನಿಸಲ್ಲ ಎಂದರು.

ಸಿಡಿ ಪ್ರಕರಣ ಹಿನ್ನೆಲೆ ಆರು ಸಚಿವರಿಂದ ಮತ್ತೆ ಕೋರ್ಟ್ನಲ್ಲಿ ಸ್ಟೇ ತಂದ ಬಗ್ಗೆ ಮಾತನಾಡಿದ ಅವರು, ಜನಪ್ರತಿನಿಧಿಗಳಾದವರು ಎಚ್ಚರಿಕೆಯಿಂದ ಇರಬೇಕು. ನನಗೂ ಮಾಧ್ಯಮವನ್ನ ಬ್ಯಾನ್ ಮಾಡಿ ಎಂದರು. ಆದರೆ, ನಾನು ಮಾತ್ರ ಬ್ಯಾನ್ ಮಾಡಿಲ್ಲ. ಮಾಧ್ಯಮದವರು ಎಷ್ಟು ಜನ ಇರುತ್ತಾರೋ ಅಷ್ಟೂ ನಮಗೆ ಒಳ್ಳೆಯದು.

Related