ಹೈದರಾಬಾದ್ , ಫೆ. 18 : ಪೋಷಕರು ಸ್ವಲ್ಪ ದಿನದ ನಂತರ ಮದುವೆ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಮನನೊಂದು 22ರ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಕಾಮರೆಡ್ಡಿ ಗ್ರಾಮದಲ್ಲಿ ನಡೆದಿದೆ.
ನರೇಶ್(22) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂಲತಃ ಬನ್ಸ್ವಾಡಾದ ಪೋಥಂಗಲ್ ಗ್ರಾಮದವನಾಗಿರು ನರೇಶ್ ಬೊರ್ಲಾಂನಲ್ಲಿ ಇರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದನು. ಮನೆಯವರು ಮದುವೆ ಮಾಡಿಸದ್ದಕ್ಕೆ ನರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.