ಕೊಪ್ಪಳ : ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರಾರ್ಥನಾ ಸಭೆ ಆಯೋಜಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ನಾಗಮಣಿ ಜಿಂಕಲ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿ, ಮಧ್ಯರಾತ್ರಿ ಮಹಿಳೆ ನಿರ್ಭಯವಾಗಿ ನಡೆದುಕೊಂಡು ಹೋಗುವುದೇ ಸ್ವಾತಂತ್ರ್ಯ ಎಂದು ಗಾಂಧೀಜಿ ಕಂಡ ನನಸನ್ನು ಮಹಿಳೆಯರು ರಾತ್ರಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಇಲ್ಲಿ ನನಸು ಮಾಡಿದ್ದಾರೆ ಎಂದರು.
ರಾಜ್ಯ ಮಾಧ್ಯಮ ವಿಶ್ಲೇಷಕಿ ಶೈಲಜಾ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳರವರ ನೇತೃತ್ವದಲ್ಲಿ ಭಜನೆ, ಪ್ರಾರ್ಥನೆ ನಡೆಯಿತು. ರಘುಪತಿ ರಾಘವ ರಾಜಾ ರಾಂ ಗೀತೆಯೊಂದಿಗೆ ಬೆಳಗಿನ ಜಾವದವರೆಗೆ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶಾಲಾಕ್ಷಿ ತಾವರಗೇರಿ, ವೀರೇಶ ತಾವರಗೇರಿ, ಮಂಜುನಾಥ ಜಿ. ಗೊಂಡಬಾಳ, ಗವಿಸಿದ್ದಪ್ಪ ಪಾಟೀಲ್, ರಾಜು ಕಾತರಕಿ, ಶಿವರಡ್ಡಿ ಭೂಮಕ್ಕನವರ, ಶೀಲಾ ಹಾಲ್ಕುರಕಿ, ಸವಿತಾ ಗೋರಂಟ್ಲಿ, ರಜಿಯಾಬೇಗಂ, ಜಯಶ್ರೀ ಇನ್ನಿತರರಿದ್ದರು.