ಅಪರಿಚಿತ ವ್ಯಕ್ತಿಯ ಕೊಲೆ ಶಂಕೆ!

ಅಪರಿಚಿತ ವ್ಯಕ್ತಿಯ ಕೊಲೆ ಶಂಕೆ!

ಮೈಸೂರು : ನಗರದ ಮೆಟ್ರೊಪೋಲ್ ಬಸ್ ನಿಲ್ದಾಣದ ಬಳಿ ರಕ್ತದ ಮಡುವಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಕೊಲೆ, ಮೃತ ಅಪರಿಚಿತ ವ್ಯಕ್ತಿ ಮಾನಸಿಕ ಅಸ್ವಸ್ಥ ಹಾಗೂ ಭಿಕ್ಷುಕ ಇರಬಹುದು ಎನ್ನಲಾಗಿದೆ. ಅಲ್ಲದೇ, ಮೃತ ವ್ಯಕ್ತಿಯ ದೇಹದ ಬಳಿ ಹತ್ತಕ್ಕೂ ಹೆಚ್ಚು ಜನರ ವಿವಿಧ ಗುರುತಿನ ಚೀಟಿಗಳು (ಬೇರೆಯವರ ಆಧಾರ್, ಮತದಾನ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್) ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಇಷ್ಟೊಂದು ಗುರುತಿನ ಚೀಟಿಗಳು ಈತನ ಕಿಸೆಯೊಳಗೆ ಹೇಗೆ ಬಂದಿದೆ ಎಂಬುದೇ ವಿಚಿತ್ರ, ಎಲ್ಲದಕ್ಕೂ ತನಿಖೆ ಬಳಿಕವೇ ಉತ್ತರ ಸಿಗಬೇಕಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related