ಬೈಕ್ ಪಾರ್ಕ್ ನೆಪದಲ್ಲಿ ವ್ಯಕ್ತಿಯ ಕೊಲೆ

ಬೈಕ್ ಪಾರ್ಕ್ ನೆಪದಲ್ಲಿ ವ್ಯಕ್ತಿಯ ಕೊಲೆ

ರಾಯಚೂರು : ಬೈಕ್ ಪಾರ್ಕ್ ನೆಪದಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ರಾಯಚೂರಿನಲ್ಲಿ ನಡೆದಿದೆ.

ನಗರದ ಪಾರ್ ಕೋಟ್ ಬಡಾವಣೆ ನಿವಾಸಿ ಸಲ್ಮಾನ್ ಮಹೆಬೂಬ (28) ಹತ್ಯೆಗೀಡಾದ ವ್ಯಕ್ತಿ. ತಡರಾತ್ರಿ ಗಂಗಾ ನಿವಾಸದ ಬಳಿ ಬೈಕ್ ನಿಲ್ಲಿಸುವ ವಿಚಾರವಾಗಿ ಗಲಾಟೆ ನಡೆದಿದೆ.

ನಾಲ್ವರ ದುಷ್ಕರ್ಮಿಗಳ ಗುಂಪು ಸಲ್ಮಾನ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಸದರ್‌ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಬಳಿಕ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.

Related