ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲವೆಂದ ಶಾಸಕ

ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲವೆಂದ ಶಾಸಕ

ಬೊಮ್ಮನಹಳ್ಳಿ: ಶಾಸಕನಾಗಿ ನಾಗರೀಕರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇನೆಂಬ ತೃಪ್ತಿ ನನಗಿದೆ. ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲವೆಂದು  ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಎಂ. ಸತೀಶ್ ರೆಡ್ಡಿರವರು ನುಡಿದರು.

ಇಂದು ವಾರ್ಡ್ ನಂ. 190ರ ಮಂಗಮ್ಮನಪಾಳ್ಯದ ಸೋಮಸಂದ್ರಪಾಳ್ಯ ಕೆರೆ ಹಾಗೂ ಆಟದ ಮೈದಾನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು, ಪ್ರತಿ ವಾರ್ಡ್ನಲ್ಲಿಯೂ ಉದ್ಯಾನವನಗಳನ್ನು ನಿರ್ಮಿಸಿ ಹಸಿರು ಉಳಿಸಿ ಬೆಳೆಸಲು ಸಂಕಲ್ಪ ತೊಟ್ಟಿದ್ದೆನು. ಸೋಮಸಂದ್ರಪಾಳ್ಯ ಕೆರೆ ಅಭಿವೃದ್ದಿಗೆ ೬ ಕೋಟಿ ವೆಚ್ಚ ತಗುಲಿದ್ದು, ವಾಕಿಂಗ್ ಟ್ರಾö್ಯಕ್, ಮಕ್ಕಳ ಆಟಿಕೆಗಳು, ವ್ಯಾಯಮದ ಸಲಕರಣೆಗಳು ಜನರನ್ನು ಆಕರ್ಷಿಸುತ್ತದೆ. ಹಾಗೆಯೇ ಕ್ರೀಡಾಪಟುಗಳಿಗೆ ಆಟದ ಮೈದಾನವನ್ನು ಕಲ್ಪಿಸಿಕೊಡುವ ಬೇಡಿಕೆಯನ್ನು ನೆರವೇರಿಸಿದ್ದೇನೆ.

ಸೋಮಸಂದ್ರಪಾಳ್ಯದಲ್ಲಿರುವ ಕೆಸಿಡಿಸಿಗೆ ಬೆಂಗಳೂರಿನ ಕಸವೆಲ್ಲಾ ಈ ಹಿಂದೆ ಬರುತ್ತಿತ್ತು. ಸ್ವ ಪ್ರಯತ್ತದಿಂದಾಗಿ ಇಂದು ೪೫೦ ಟನ್ ಕಸದಿಂದ ೬೦ ಟನ್ ಕಸ ಬರುವಂತೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕೆಸಿಡಿಸಿಯನ್ನು ಮುಚ್ಚುವಂತಹ ಕೆಲಸ ಮಾಡುತ್ತೇವೆ. ನಮ್ಮ ಕ್ಷೇತ್ರದ ಕಸವೇ ೫೦ ಟನ್‌ನಷ್ಟು ಬರುತ್ತಿದ್ದು ಈಗಾಗಲೇ ಕ್ಷೇತ್ರದ ಹಲವೆಡೆ ಕಸ ವಿಂಗಡಣೆ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕೆಸಿಡಿಸಿಯನ್ನು ಪೂರ್ತಿಯಾಗಿ ಮುಚ್ಚಿಸುತ್ತೇವೆಂಬ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಟಿವಿ ಹಾಸ್ಯ ಕಲಾವಿದರ ತಂಡದಿAದ ಹಾಸ್ಯ ಸಂಜೆ ಹಾಗೂ ರೇಖಾ ಮೋಹನ್ (ರೆಮೋರವರಿಂದ) ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಸೋಮಸಂದ್ರಪಾಳ್ಯ ಶ್ರೀನಿವಾಸ ರೆಡ್ಡಿ, ಮಂಗಮ್ಮನ ಪಾಳ್ಯದ ವಾರ್ಡಿನ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರುಗಳು, ಕಾರ್ಯಕರ್ತರು, ನಾಗರಿಕರು ಭಾಗವಹಿಸಿದ್ದರು.

Related