ಕಮಲನಗರ : ತಾಲ್ಲೂಕಿನ ಸೋನಾಳ ಗ್ರಾಮದ ಮುನೀರ ಅವರ ಹೊಲದಲ್ಲಿನ ಜೋಳ ಬಣವೆ ಬೆಂಕಿಗೆ ಆಹುತಿಯಾಗಿದೆ.
ರೈತ ಮುನೀರ್ 4 ಕಿ.ಮೀ ದೂರದ ಹೊರಂಡಿ ಗ್ರಾಮದಿಂದ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜೋಳದ ಕಣಕಿ ತಂದು ಹೊಲದಲ್ಲಿ ಇಟ್ಟಿದ್ದರು. ಊಟ ಮಾಡಿದ ನಂತರ ಜೋಳದ ಬಣವಿ ಕೂಡಿಡೋಣ ಎಂದು ಮನೆಗೆ ತೆರಳಿದರು.
ಮರಳಿ ಬರುವಷ್ಟರಲ್ಲಿಯೇ ಬಣವಿಗೆ ಬೆಂಕಿ ಹತ್ತಿ ಸಂಪೂರ್ಣ ಭಸ್ಮವಾಗಿದೆ ಎಂದು ಗ್ರಾಮದ ಮುಖಂಡ ಅಂಕುಶ ತಿಳಿಸಿದರು. ಇದರಿಂದ 15.000 ರೂ. ನಷ್ಟವಾಗಿದೆ. ಸರ್ಕಾರ ಬಡ ರೈತ ಮುನೀರ ಅವರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.