ಕೆ.ಆರ್.ಪುರ, ಫೆ. 20: ಕೆ.ಸಿಪ್ಪೇಗೌಡ ನಿಧರಾಗಿರುವ ಹಿನ್ನೆಲೆ ಬೆಂಗಳೂರು ಪೂರ್ವ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಕೆ.ಆರ್.ಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಣೆ ಮಾಡಿದರು. ಈ ಸಮಯದಲ್ಲಿ ಪೂರ್ವ ತಾಲೂಕು ವೈಧ್ಯಾದಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಮಾಜಿ ಅದ್ಯಕ್ಷ ಸಿಪ್ಪೇಗೌಡ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ್ದರು ಎಂದು ಹೇಳಿದರು.
ಶ್ರದಾಂಜಲಿ ಸಭೆಯಲ್ಲಿ ವೈದ್ಯರಾದ ಡಾ.ಲೀಲಾ, ಡಾ.ಲೀಲಾ ಸಂಪತ್ ಕುಮಾರ್, ಬೆಂ.ಪೂ.ತಾಲೂಕು ನೌಕರರ ಸಂಘದ ನಿರ್ದೇಶಕರು ರಾಜಾರೆಡ್ಡಿ, ಸ್ಥಳೀಯ ಮುಖಂಡರಾದ ರೆ.ನಿರಂಜನ್, ಸಾಹುಕಾರ್ ಗಿರಿ, ಶಿಕ್ಷಣ ಇಲಾಖೆಯ ಪಧಾದಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.