ಕಳಚಿಬಿದ್ದ ಬಿಜೆಪಿಯ ಬಂಡವಾಳ

ಕಳಚಿಬಿದ್ದ ಬಿಜೆಪಿಯ ಬಂಡವಾಳ

ಯಾದಗಿರಿ : ಸುರಪುರ ತಾಲೂಕಿನ ಪೇಠ ಅಮ್ಮಾಪುರ ಜಿ.ಪಂ ಕ್ಷೇತ್ರ ಸೇರಿದಂತೆ ಸುರಪುರ ಮತಕ್ಷೇತ್ರದ ಎಲ್ಲಾ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರಿಗೆ ಮಲ್ಲಿಬಾವಿ ಗ್ರಾಮದಲ್ಲಿ ಸನ್ಮಾನ ಸಮಾರಂಭ ನಡೆಸಲಾಯಿತು.

ಮೊದಲಿಗೆ ಪೇಠ ಅಮ್ಮಾಪುರ ಗ್ರಾ.ಪಂ ವ್ಯಾಪ್ತಿಯ ವಾಗಣಗೇರಾ ಪೇಠ ಅಮ್ಮಾಪುರ ಬೈಚಬಾಳ ದೇವರಗೋನಾಲ ಮಾಚಗುಂಡಾಳ ಮಾವಿನಮಟ್ಟಿ ಜಾಲಿಬೆಂಚಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾ.ಪಂ ಸದಸ್ಯರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ನೇತೃತ್ವವಹಿಸಿದ್ದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಎಲ್ಲಾ ಸದಸ್ಯರು ಗ್ರಾಮಗಳ ಅಭಿವೃದ್ಧಿಗೆ ಮೊದಲು ಆದ್ಯತೆ ನೀಡಿ, ಅಲ್ಲದೆ ವಿರೋಧ ಪಕ್ಷದವರು ತೋರಿಸುವ ಯಾವುದೇ ಆಮಿಷಗಳಿಗೆ ಬಲಿಯಾಗದಂತೆ. ಅಲ್ಲದೆ ನರೇಂದ್ರ ಮೋದಿ ಎಂದರೆ ಸುಳ್ಳುಗಳನ್ನು ಹೇಳುವ ಹೆಡ್‌ಮಾಸ್ಟರ್ ಇದ್ದಂತೆ ಬಿಜೆಪಿ ಎಂದರೆ ಬರೀ ಸುಳ್ಳು ಹೇಳುವುವರ ಪಕ್ಷ ಎನ್ನುವಂತಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಈ ದೇಶದ ಅಭಿವೃದ್ಧಿ ಪರವಾಗಿದೆ ಬಿಜೆಪಿ ಇದಕ್ಕೆ ವಿರುದ್ಧವಾಗಿ ಇದಕ್ಕೆ ದೆಹಲಿಯಲ್ಲಿನ ರೈತರ ಹೋರಾಟ ಸಾಕ್ಷಿ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 10 ಕೆ.ಜಿ ಅಕ್ಕಿ ಉಚಿತವಾಗಿ ಕೊಟ್ಟರೂ ಹಾಗೂ ಈಗಿನ ಬಿಜೆಪಿಯವರು 2 ಕೆ.ಜೆ ಅಕ್ಕಿ ಕಡಿಮೆ ಮಾಡಿದ್ದು ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡ ವಿಠ್ಠಲ್ ಯಾದವ್ ರಮೇಶದೊರೆ, ಆಲ್ದಾಳ ನಿಂಗರಾಜ, ಬಾಚಿಮಟ್ಟಿ ಅಬ್ದುಲ್ ಗಫೂರ್, ನಗನೂರಿ ರಾಜಾ ವೇಣುಗೋಪಾಲ ನಾಯಕ, ಯಲ್ಲಪ್ಪ ಮಲ್ಲಿಬಾವಿ, ಭೀಮು ನಾಯಕ, ಮಲ್ಲಿಬಾವಿ ನೂರಕ್ಕೂ ಹೆಚ್ಚು ಜನರನ್ನು ಸನ್ಮಾನಿಸಿ ಗೌರವಿಸಲಾಯಿತು.

Related