ತುಮಕೂರು : ರೌಡಿಶೀಟರ್ ಒಬ್ಬನನ್ನು ಮತ್ತೊಂದು ಗುಂಪು ಕೊಲೆಗೈದು ಪರಾರಿಯಾದ ಘಟನೆ ತುಮಕೂರು ನಗರದ ಎಸ್ಐಟಿ ಬಡವಾವಣೆಯ ಮಂಜುಶ್ರೀ ಬಾರ್ ಎದುರು ನಡೆದಿದೆ.
ಮಂಜು ಅಲಿಯಾಸ್ ಆರ್ ಎಕ್ಸ್ ಮಂಜ (31) ಕೊಲೆಯಾದ ರೌಡಿಶೀಟರ್. ರಾತ್ರಿ ಸುಮಾರು 9.45ರ ಸುಮಾರಿನಲ್ಲಿ ಕೃತ್ಯ ನಡೆದಿದೆ.
ನಾಲ್ಕೈದು ರೌಡಿಗಳು ಬಂದು ಮಂಜು ಹೊಟ್ಟೆಗೆ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಎನ್ ಇಪಿಎಸ್ ಪೊಲೀಸರು ದೌಡಾಯಿಸಿದ್ದು, ಎನ್ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.