ರಾಜ್ಯ ಸರ್ಕಾರ ಮುಸ್ಲಿಂ ಗೂಂಡಾಗಳ ಪರ ನಿಂತಿದೆ: ಬಿಎಸ್‌ವೈ, ಡಿವಿಎಸ್

ರಾಜ್ಯ ಸರ್ಕಾರ ಮುಸ್ಲಿಂ ಗೂಂಡಾಗಳ ಪರ ನಿಂತಿದೆ: ಬಿಎಸ್‌ವೈ, ಡಿವಿಎಸ್

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮುಸ್ಲಿಂ ಗೂಂಡಾಗಳ ಪರವಾಗಿ ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಡಿವಿ ಸದಾನಂದ ಗೌಡ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಹಾಡುಆಗಲೇ ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ವ್ಯಕ್ತಿ ಮುಸ್ಲಿಂ ವ್ಯಕ್ತಿಯಾಗಿದ್ದು ಮತ್ತು ಹರ್ಷಿಕ ಪುಣ್ಣಚ್ಚ ಅವರ ಪತಿಯ ಮೇಲೆ ಹಲ್ಲೆ ಮಾಡಿದವರು ಕೂಡ ಮುಸ್ಲಿಮರು, ಆದಕಾರಣ ಮುಸ್ಲಿಮರ ಪರ ರಾಜ್ಯ ಸರ್ಕಾರವಿದೆ ಎಂದು ಆಕಾಶವಾರು ಹಾಕಿದ್ದಾರೆ.

ನಗರದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ರಾಜ್ಯವನ್ನು ಮತಾಂಧ ಭೂಮಿಯನ್ನಾಗಿ ಪರಿವರ್ತಿಸಿದೆ. ಮುಸ್ಲಿಂ ಗೂಂಡಾಗಳ ಪರ ನಿಂತಿದೆ. ಹಿಂದುಗಳನ್ನು ತೃತೀಯ ದರ್ಜೆ ನಾಗರಿಕರ ರೀತಿ ನೋಡಲಾಗುತ್ತಿದೆ ಎಂದು ಗಂಭೀರವಾಗಿ ಆಪಾದಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಮೇಲೆ ಒಂದಲ್ಲ ಒಂದು ಪ್ರಕರಣಗಳು ನಡೆಯುತ್ತಿದ್ದರು ಕೂಡ ಕಾಂಗ್ರೆಸ್ನವರು ಆರೋಪಿಗಳ ಮೇಲೆ ತೀವ್ರ ತನಿಖೆಗೊಳಪಡಿಸದೆ ಮುಸ್ಲಿಂ ಗೂಂಡಾಗಳಿಗೆ ಸಹಾಯ ಮಾಡುತ್ತಿದೆ ಎಂದು ದೂರಿದರು.

ತನ್ನದೇ ಪಕ್ಷದ ಚುನಾಯಿತ ಪ್ರತಿನಿಧಿಯ ಮಗಳ ಹತ್ಯೆಗೆ ನ್ಯಾಯ ಒದಗಿಸುವುದನ್ನು ಬಿಟ್ಟು ಆರೋಪಿ ಮನೆಗೆ ರಕ್ಷಣೆ ಭಾಗ್ಯ ಕೊಡುತ್ತಿರುವ ಸರ್ಕಾರಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ನೋವಿನಿಂದ ನುಡಿದರು. ಯಡಿಯೂರಪ್ಪ ಅವರು ಮಾತನಾಡಿ, ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಕಳೆದುಕೊಂಡಿದ್ದಾರೆ. ಭಾರತದ ಭವಿಷ್ಯಕ್ಕಾಗಿ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿದ ಮತಾಂಧರನ್ನು ಹಿಡಿಯದೆ ಹಾಗೇ ಬಿಟ್ಟಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಮನವಮಿ ಹಬ್ಬದ ದಿನ ರಾಮಭಕ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಕಲಾವಿದರಾದ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿಯ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ ಎಂದರು.

 

Related