ಮಂಡ್ಯ : ಮಹಿಳಾ ಪಿಎಸ್ಐ ಸವಿತಾಗೌಡ ಪಾಟೀಲ್ ಯುವತಿಯ ಕಪಾಳಕ್ಕೆ ಬಾರಿಸಿದ ಪ್ರಕರಣ ಸಂಬAಧ ಡಿವೈಎಸ್ಪಿ ಬಳಿ ಮಂಡ್ಯ ಎಸ್ ಪಿ ವರದಿ ಕೇಳಿದ್ದಾರೆ.
ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆಂದು ಕೋಪಗೊಂಡ ಮಹಿಳಾ ಪಿಎಸ್ಐ ಯುವತಿಯ ಕಪಾಳಕ್ಕೆ ಬಾರಿಸಿದ ಘಟನೆ ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ನಡೆದಿತ್ತು.
ಮಂಡ್ಯ ವಿಭಾಗದ ಡಿವೈಎಸ್ ಪಿ ಗೆ ಈ ಸಂಬಂಧ ವರದಿ ನೀಡುವಂತೆ ಮಂಡ್ಯ ಎಸ್ ಪಿ ಡಾ. ಅಶ್ವನಿ ಸೂಚಿಸಿದ್ದಾರೆ. ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೌಜನ್ಯದಿಂದ ವರ್ತಿಸಬೇಕು. ಕಾನೂನು ಸುವ್ಯವಸ್ಥೆ ಸಂಚಾರಕ್ಕೆ ಕರ್ತವ್ಯಕ್ಕೆ ಪೊಲೀಸರ ಜೊತೆಗೆ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಯುವತಿ ಹೆಲ್ಮೆಟ್ ಧರಿಸದೇ ಪ್ರಯಣಿಸುತ್ತಿದ್ದ ಹಿನ್ನೆಲೆ ಯುವತಿ ದ್ವಿಚಕ್ರ ವಾಹನ ಪೊಲೀಸರು ತಡೆದಿದ್ದರು. ಈ ವೇಳೆ ಪೊಲೀಸರು ಮತ್ತು ಯುವತಿಯ ನಡುವೆ ಮಾತಿಗೆ ಮಾತು ಬೆಳೆದು ಮಹಿಳಾ ಪಿಎಸ್ ಐ ಯುವತಿಗೆ ಕಪಾಳಮೋಕ್ಷ ಮಾಡಿದ್ದರು.