ಏಕವಚನ ಬಳಕೆ ಹಿಂದೆ ಸಿಎಂ ಹೇಳಿದ ವಿಷಯವನ್ನೂ ನೋಡಬೇಕಲ್ವಾ?: ಸಂತೋಷ್ ಲಾಡ್

ಏಕವಚನ ಬಳಕೆ ಹಿಂದೆ ಸಿಎಂ ಹೇಳಿದ ವಿಷಯವನ್ನೂ ನೋಡಬೇಕಲ್ವಾ?: ಸಂತೋಷ್ ಲಾಡ್

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಚಿತ್ರದುರ್ಗ ಕಾರ್ಯಕ್ರಮ ಒಂದರಲ್ಲಿ ರಾಷ್ಟ್ರಪತಿಯವರಿಗೆ ಬಾಯಿ ತಪ್ಪಿ ಮಾತಾಡಿದರೆ ಹೊರತಾಗಿ ಉದ್ದೇಶಪೂರ್ವಕವಾಗಿ ಅವರು ಏಕವಚನದಲ್ಲಿ ಮಾತಾಡಿಲ್ಲ ಎಂದು ಕಾರ್ಮಿಕರ ಸಚಿವ ಸಂತೋಷ್ ಲಾಡ್ ಅವರು ಹೇಳಿದ್ದಾರೆ.

ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಏಕವಚನ ಬಳಕೆ ಮಾತ್ರ ಬಿತ್ತರಿಸುತ್ತಿದ್ದಾರೆ. ಆದರೆ ಏಕವಚನದ ಮುಂದೆ ಏನು ಮಾತಾಡಿದರೆ ಎಂದು ಸಂಪೂರ್ಣವಾಗಿ ನೋಡಿ ಮಾತನಾಡಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಏಕವಚನ ಬಳಕೆ ಹಿಂದೆ ಸಿದ್ದರಾಮಯ್ಯನವರು ಹೇಳಿದ ವಿಷಯವನ್ನೂ ನೋಡಬೇಕಲ್ವಾ? ಮಹತ್ವದ ವಿಷಯ ಹೇಳಿದ್ರಲ್ವಾ ಅವರು ಎಂದು ತಿಳಿಸಿದರು.

ಅವರೊಬ್ಬರ ವಿಧವೆ ಹೆಣ್ಣು ಮಗಳು, ಬುಡಕಟ್ಟು ಸಮಾಜದವರು. ಅದೇ ಕಾರಣಕ್ಕೆ ಅವರನ್ನು ಸಂಸತ್ ಉದ್ಘಾಟನೆಗೆ ಕರೆದಿಲ್ಲ. ಪ್ರಧಾನಿ ಮೋದಿ ಬಾಲರಾಮನ ಪ್ರಾಣ ಪ್ರತಿಷ್ಠಾ ಪೂಜೆ ಮಾಡಿದ್ದು ತಪ್ಪು. ಹಿಂದೂ ಸಂಸ್ಕೃತಿ ಪ್ರಕಾರ ಬ್ರಾಹ್ಮಣರೇ ಪೂಜೆ ಮಾಡಬೇಕು. ಇದರ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.

 

Related