ಮೈಸೂರು, ಜೂ 09 : ತಮ್ಮ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುವವರನ್ನು ವಿಪಕ್ಷನಾಯಕ ಸಿದ್ದರಾಮಯ್ಯ ಸೀಳು ನಾಯಿಗಳಿಗೆ ಹೋಲಿಸಿರುವ ವಿಡಿಯೋ ವೈರಲ್ ಆಗಿದೆ. ಮೊನ್ನೆ ಮೈಸೂರಿನಲ್ಲಿ ನಡೆದ ದಕ್ಷಿಣ ಪದವೀಧರ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ನಾನು ಒಬ್ಬ ಮಾತಾಡಿದ್ರೆ ಅವರು ಸೀಳು ನಾಯಿಗಳ ಥರ ಮೇಲೆ ನನ್ನ ಮೇಲೆ ಬೀಳುತ್ತಾರೆ. ಅವರು ಸೀಳು ನಾಯಿಗಳ ಥರ ನನ್ನ ಮೇಲೆ ಬಿದ್ದರೂ ನಮ್ಮವರು ಯಾರು ತಿರುಗಿ ಮಾತಾಡಲ್ಲ. ಇದೇ ಬಂದಿರೋದು ತಾಪತ್ರಯ ಎಂದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿದ್ದರಾಮಯ್ಯ ಪಕ್ಷದಲ್ಲೇ ತನನಗೆ ಬೆಂಬಲ ಸಿಗುತ್ತಿಲ್ಲ ಅಂತ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.