ಆಂಜನೇಯಪ್ಪ ಅವರಿಗೆ ಸಿದ್ದರಾಮಯ್ಯ ಅವರೆ ರಾಮನಂತೆ: ವಿಜಯೇಂದ್ರ

ಆಂಜನೇಯಪ್ಪ ಅವರಿಗೆ ಸಿದ್ದರಾಮಯ್ಯ ಅವರೆ ರಾಮನಂತೆ: ವಿಜಯೇಂದ್ರ

ಬೆಂಗಳೂರು: ಅವರ ನಾಲಿಗೆ ಅವರವರ ಸಂಸ್ಕೃತಿಯನ್ನು ತೋರಿಸಿಕೊಡುತ್ತದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾಜಿ ಸಚಿವ ಆಂಜನೇಯಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಅವರಿಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಇಂದು ಇಡೀ ದೇಶದಲ್ಲಿ ಅಯೋಧ್ಯೆ ಎಂಬುವುದು ಭಾವನಾತ್ಮಕ ಸಂಬಂಧಯನ್ನುವುದನ್ನು, ದೇಶದ ಮತ್ತು ಜಗತ್ತಿನ ಎಲ್ಲಾ ಹಿಂದುಗಳಲ್ಲಿಯು ಇರುವುದು ಕಂಡು ಬರುತ್ತದೆ ಎಂದು ಹೇಳಿದರು.

ಶ್ರೀ ರಾಮನ ಜನ್ಮಸ್ಥಳದ ಬಗ್ಗೆ ಈ ರೀತಿ ಹುಚ್ಚುಚ್ಚಾಗಿ ಹೇಳಿಕೆ ನೀಡುವವರಿಗೆ ನಾವು ಏನೂ ಉತ್ತರ ಕೊಡಲು ಸಾಧ್ಯವಿಲ್ಲ. ಅದಕ್ಕೆ ಜನ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಸಚಿವ ಆಂಜನೇಯಪ್ಪ ನವರಿಗೆ ಮಾತಿನಲ್ಲಿ ಉತ್ತರಿಸಿದ್ದಾರೆ.

ಆಂಜನೇಯಪ್ಪ ಅವರು ಹೇಳಿಕೆಗಳು ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಿದೆ ಇದರಿಂದ ಕಾಂಗ್ರೆಸ್ ಸರ್ಕಾರದ ನಡವಳಿಕೆಯಲ್ಲಿ ಮತ್ತು ಎಲ್ಲವೂ ಕೂಡ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಮಾಡುವುದರ ಬಗ್ಗೆ ಹಿಂದೆ ಸಿದ್ದರಾಮಯ್ಯ ಅವರು ಏನ್ ಹೇಳಿದ್ದಾರೆ ಎಂದು ಅದನ್ನು ಕೂಡ ನಾವು ನೋಡಿದ್ದೇವೆ. ಆದರೆ ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ ಎಂದರು.

Related