ಬೆಂಗಳೂರು : ಹಿರಿಯ ನಟ ಶಿವರಾಂ ವಿಧಿವಶ ಹಿನ್ನಲೆ ಬೆಂಗಳೂರಿನಲ್ಲಿ ನಟ ದ್ವಾರಕೀಶ್ ಕಂಬನಿ ಮಿಡಿದಿದ್ದಾರೆ.
ಶಿವರಾಂ ಇಲ್ಲದೇ ನಾನು ಯಾವುದೇ ಕಾರ್ಯಕ್ರಮಗಳನ್ನು ಮಾಡುತ್ತಿರಲಿಲ್ಲ. 60ನೇ ಇಸವಿಯಿಂದ ನನ್ನ ಮತ್ತು ಅವನ ಒಡನಾಟ ಪ್ರಾರಂಭವಾಗಿತ್ತು ಎಂದು ನೆನೆದು ಭಾವುಕರಾದರು.
ನನ್ನ ಎಲ್ಲ ಚಿತ್ರಗಳಲ್ಲಿಯೂ ಅವರು ಪಾತ್ರ ಮಾಡಿದ್ದಾರೆ. ಶಿವರಾಂ ಒಬ್ಬ ಅದ್ಭುತ ನಟ ಎಂದು ತೀವ್ರ ದುಃಖ ವ್ಯಕ್ತಪಡಿಸಿದರು.
ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಅವರ ಕುಟುಂಬ ವರ್ಗದವರಿಗೂ ಮತ್ತು ಅಭಿಮಾನಿಗಳಿಗೂ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.