ಬಿಜೆಪಿ ನಾಯಕರಿಗೆ ಶೆಟ್ಟರ್ ತಿರುಗುಬಾಣ

ಬಿಜೆಪಿ ನಾಯಕರಿಗೆ ಶೆಟ್ಟರ್ ತಿರುಗುಬಾಣ

ಹುಬ್ಬಳ್ಳಿ: ರಾಜ್ಯದಲ್ಲಿ ಕಳೆದ ನಾಲ್ಕುವರೆ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು ಆದರೆ ಕರಸೇವಕರ ಮೇಲಿರುವ ಕೇಸನ್ನು ಯಾಕೆ ಹಿಂಪಡೆಯಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀವು ಅಧಿಕಾರದಲ್ಲಿದ್ದಾಗ ಕರಸೇವಕರು ನಿಮಗೆ ನೆನಪಾಗಲಿಲ್ಲವಾ ಅವರ ಮೇಲಿದ್ದ ಕೇಸನ್ನು ಯಾಕೆ ನೀವು ಇಂಪಡೆಯಲ್ಲಿಲ್ಲ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತದಂತೆ 108 ನಾಟಕ ಬಾಳುತ್ತಿದ್ದಾರೆ ಎಂದು ಗುರುವಿದ್ದರೆ.

ನಾನು ಸಿಎಂ ಇದ್ದಾಗ ಅನೇಕ ಕೇಸ್ ಹಿಂಪಡೆಯಲಾಗಿತ್ತು. ಕರ ಸೇವಕರ ಬಗ್ಗೆ ಈಗ ಅಭಿಮಾನದಿಂದ ಮಾತಾಡುತ್ತಿರುವವರು, ಅಶೋಕ್ ಹೋಮ್ ಮಿನಿಸ್ಟರ್ ಇದ್ದಾಗ ಎಷ್ಟು ಕೇಸ್ ಹಿಂಪಡೆದ್ರು? ಆಗ ಯಾಕೆ ಕರ ಸೇವಕರ ನೆನಪು ಆಗಲಿಲ್ಲ ಎಂದು ಪ್ರಶ್ನಿಸಿದರು.

ಬಿಎಸ್ ಯಡಿಯೂರಪ್ಪ, ಬೊಮ್ಮಾಯಿ, ಸದಾನಂದಗೌಡರು ಸಿಎಂ ಆಗಿದ್ದರು. ಕರ ಸೇವಕರ ಬಗ್ಗೆ ಈಗ ಅಭಿಮಾನದಿಂದ ಮಾತಾಡುತ್ತಿರುವವರ ಇವರಿಗೆ ಆಗ ಯಾಕೆ ಕರಸೇವಕರ ನೆನಪು ಆಗಲಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಲಾಭ ಪಡೆಯಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

 

Related