ಸತೀಶ್ ರೆಡ್ಡಿ ನಾಮಪತ್ರ ಸಲ್ಲಿಕೆ

ಸತೀಶ್ ರೆಡ್ಡಿ ನಾಮಪತ್ರ ಸಲ್ಲಿಕೆ

ಬೊಮ್ಮನಹಳ್ಳಿ: ನನ್ನ ಅಭಿವೃದ್ದಿ ಕರ‍್ಯಗಳೇ ನನಗೆ ಶ್ರೀರಾಮ ರಕ್ಷೆಯಾಗಲಿದೆ ಎಂದು ಶಾಸಕ ಎಂ. ಸತೀಶ್ ರೆಡ್ಡಿರವರು ನುಡಿದರು.

ಸೋಮವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಲ್ಕನೇ ಬಾರಿ ನಾಮಪತ್ರ ಸಲ್ಲಿಸುವ ಮುನ್ನ ಧರ್ಮಪತ್ನಿ ಆಶಾರವರೊಂದಿಗೆ ಹೊಂಗಸಂದ್ರದ ಶ್ರೀ ವೀರಾಂಜನೇಯಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ತಮಟೆ ವಾದ್ಯಗಳ ಮೂಲಕ ಬಿಬಿಎಂಪಿ ವಲಯ ಕಚೇರಿ ಪಕ್ಕದಲ್ಲಿರುವ ಗಣಪತಿ ದೇವಾಲಯಕ್ಕೆ ಆಗಮಿಸಿ ಪೂಜೆಯನ್ನು ಸಲ್ಲಿಸಿದರು. ದೇವಾಲಯದಿಂದ ಕಾರ್ಯಕರ್ತರು ಹಾಗೂ ಮುಖಂಡರು ಸತೀಶ್ ರೆಡ್ಡಿ ಅವರನ್ನು ಹೊತ್ತು ಬಿಬಿಎಂಪಿ ವಲಯ ಕಚೇರಿಗೆ ಕರೆತಂದರು. ಸತೀಶ್ ರೆಡ್ಡಿಯವರಿಗೆ ಜಯವಾಗಲಿ ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ಕರ‍್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಶಾಸಕರು ಧನ್ಯವಾದಗಳನ್ನರ್ಪಿಸಿ ಮತ್ತೊಮ್ಮೆ ನಿಮ್ಮ ಮನೆ ಮಗನನ್ನು ಹರಸಿ ಎಂದು ಮನವಿ ಮಾಡಿಕೊಂಡರು.

ಇನ್ನು ಇದೇ ಸಂದರ್ಭದಲ್ಲಿ ಸತೀಶ್ ರೆಡ್ಡಿ ಮಾತನಾಡಿ,  ಬಂದು ಹೋಗುವ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಹೆಚ್ಚು ಗಮನವನ್ನು ನೀಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಎಂ ಸತೀಶ್ ರೆಡ್ಡಿ ಹೇಳಿದರು. ಅವರು ಸೋಮವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಲ್ಕನೇ ಬಾರಿ ಉಮೇದುವಾರಿಕೆ ಸಲ್ಲಿಸಿ ಮಾತನಾಡಿದರು. ಇದುವರೆಗೂ ಜನರಿಗೆ ಕಾಣಿಸಿಕೊಳ್ಳದ, ಕೊರೋನಾ ಸಂದರ್ಭದಲ್ಲಿ ಎಲ್ಲಿದ್ದರೂ ಎಂದು ಯಾರಿಗೂ ಗೊತ್ತಿಲ್ಲದ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಕಣದಲ್ಲಿದ್ದಾರೆ. ಅವರಿಗೆ ಠೇವಣಿ ಇಲ್ಲದಂತೆ ಈ ಬಾರಿ ಬೊಮ್ಮನಹಳ್ಳಿಯ ಜನತೆ ಮಾಡಲಿದ್ದಾರೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿಜಿ ಅವರ ನೇತೃತ್ವದ ಸರಕಾರ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಗಳು ಡಬಲ್ ಫೋರ್ಸ್ನಲ್ಲಿ ಅಭಿವೃದ್ದಿ ಕಾರ್ಯವನ್ನು ಮಾಡಿವೆ. ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ನನ್ನ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಇವುಗಳ ಆಧಾರದ ಮೇಲೆ ಮತದಾರರು ಹೆಚ್ಚಿನ ಅಂತರದಿಂದ ಗೆಲ್ಲಿಸಲಿದ್ದಾರೆ ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಅವರು ಹೊಂಗಸಂದ್ರದ ಶ್ರೀ ವೀರಾಂಜನೇಯಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ತಮಟೆ ವಾದ್ಯಗಳ ಮೂಲಕ ಬಿಬಿಎಂಪಿ ವಲಯ ಕಚೇರಿ ಪಕ್ಕದಲ್ಲಿರುವ ಗಣಪತಿ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿದರು. ದೇವಾಲಯದಿಂದ ಕಾರ್ಯಕರ್ತರು ಹಾಗೂ ಮುಖಂಡರು ಸತೀಶ್ ರೆಡ್ಡಿ ಅವರನ್ನು ಹೊತ್ತು ಬಿಬಿಎಂಪಿ ವಲಯ ಕಚೇರಿಗೆ ಕರೆತಂದರು.

ಪತ್ನಿ ಆಶಾ ಸಮೇತ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿದ ಸತೀಶ್ ರೆಡ್ಡಿ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರಾದ ಹೊಂಗಸಂದ್ರ ಶ್ರೀನಿವಾಸ್ ರೆಡ್ಡಿ, ನ್ಯಾನಪನಹಳ್ಳಿ ಮಂಜುನಾಥ್, ಮಂಜುನಾಥ್ ರೆಡ್ಡಿ, ಸಯ್ಯದ್ ಸಲಾಂ, ರಮೇಶ್, ಕೇಬಲ್ ಶ್ರೀನಿವಾಸ್ ರೆಡ್ಡಿ ಮತ್ತಿತರರು ಹಾಜರಿದ್ದರು.

ಆಸ್ತಿ ಘೋಷಣೆ

ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ-ಸತೀಶ್ ರೆಡ್ಡಿ ಚರಾಸ್ತಿ ಒಟ್ಟು ಮೌಲ್ಯ 94,61,32,273, ಪತ್ನಿ ಆಶಾ ಚರಾಸ್ಥಿ ಮೌಲ್ಯ 9,83,01,415, ಸತೀಶ್ ರೆಡ್ಡಿ ವಿವಿಧ ಬ್ಯಾಂಕುಗಳಲ್ಲಿ ಸಾಲ 39,82,80,306, ಪತ್ನಿ ಆಶಾ ಪಡೆದಿರುವ ಸಾಲ 7,41,58,252, ಸತೀಶ್ ರೆಡ್ಡಿ ಸ್ಥಿರಾಸ್ತಿ ಒಟ್ಟು ಮೌಲ್ಯ 17,66,50,000, ಪತ್ನಿ ಆಶಾ ಸ್ಥಿರಾಸ್ಥಿ ಮೌಲ್ಯ6,15,99,050,ಸತೀಶ್ ರೆಡ್ಡಿ ಬಳಿ ಪೋರ್ಶೆ ಕಾರು, ಆಡಿ ಕ್ಯೂ ಕಾರು, ಪತ್ನಿ ಬಳಿ ಮಾರುತಿ ಬಲೆನೋ ಮತ್ತು ರೇವಾ ಕಾರು ಹೊಂದಿದ್ದಾರೆ,ಸತೀಶ್ ರೆಡ್ಡಿ ಬಳಿ ಚಿನ್ನ 1350 ಗ್ರಾಂ, ಬೆಳ್ಳಿ 20 ಕೆಜಿ, ಪತ್ನಿ ಆಶಾ ಬಳಿ 2600 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, ಮಗಳು ರಿಷಿಕಾ ಬಳಿ 400 ಗ್ರಾಂ ಚಿನ್ನ, ಮಗ ನಿಶಾಂತ್ 400 ಗ್ರಾಂ ಚಿನ್ನ ಇದ್ದು ಸತೀಶ್ ರೆಡ್ಡಿ ಒಟ್ಟು ಆಸ್ತಿ ಮೌಲ್ಯ 127,19,39,317

 

 

Related