“ಪುರಾಣ ಕಾರ್ಯಕ್ರಮಕ್ಕೆ ಚಾಲನೆ”

“ಪುರಾಣ ಕಾರ್ಯಕ್ರಮಕ್ಕೆ ಚಾಲನೆ”

ಚಿಂಚೋಳಿ : ತಾಲ್ಲೂಕಿನ ಸುಕ್ಷೇತ್ರ ಐನಾಪುರ ಗ್ರಾಮದ ಹಿರೇಮಠ ಸಂಸ್ಥಾನದಲ್ಲಿ ಶ್ರಾವಣ ಮಾಸದ ಪುರಾಣ ಕಾರ್ಯಕ್ರಮ ಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಶಿವಯೋಗಿ ಸಿದ್ಧಾರೂಢರ ಪುರಾಣವನ್ನು ಶ್ರಾವಣ ಮಾಸದ 15 ದಿನಗಳ ಕಾಲ ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸೋ ಮೂಲಕ ಉದ್ಘಾಟಿಸಿದರು. ಪೂಜ್ಯ ಪಂಚಾಕ್ಷರಿ ದೇವರು ಹೀರೆಮಠದ ನೂತನ ಉತ್ತರಾಧಿಕಾರಿಗಳು ವಚನ ಮಾಡುತ್ತಿದ್ದರು. ಸಂಗೀತ ಸೇವೆ ಪಂಡಿತ್ ವೇದ ಮೂರ್ತಿ ಬಸವಲಿಂಗ ಗವಾಯಿಗಳು, ತಬಲಾ ವಾದಕರಾಗಿ ಇಸ್ಮಾಯಿಲ್ ಐನಾಪುರ ಪೂಜ್ಯ ಪಂಚಾಕ್ಷರಿ ದೇವರು, ವೀರಶೆಟ್ಟಿ ಪಾಟೀಲ್, ರವಿಕಾಂತ್ ಮಠಪತಿ, ಶಿವಕುಮಾರ್ ಚೌಡಶೆಟ್ಟಿ, ನಾಗಶೆಟ್ಟಿ ಕಾಳಗಿ, ಹಣಮಂತ ಮದರಗಿ ಮತ್ತಿತರರಿದ್ದರು.

Related