ಕಷ್ಟದಲ್ಲಿರುವವರಿಗೆ ಕೂಡಲೇ ಸ್ಪಂದಿಸಿ

ಕಷ್ಟದಲ್ಲಿರುವವರಿಗೆ ಕೂಡಲೇ ಸ್ಪಂದಿಸಿ

ಕೆ.ಆರ್ ಪುರ : ಪೊಲೀಸರು ಒಂದು ಕುಟುಂಬದಂತೆ ಕಾರ್ಯನಿರ್ವಹಿಸಬೇಕು ಎಂದು ಟ್ರಾಫಿಕ್ ಪೂರ್ವ ವಿಭಾಗದ ಡಿಸಿಪಿ ನಾರಾಯಣ್ ಅವರು ತಿಳಿಸಿದರು.

ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿ, ಕಷ್ಟದಲ್ಲಿರುವವರಿಗೆ ದೇವರಾಗಿ ಕಾಣುವುದು ಟ್ರಾಫಿಕ್ ಪೋಲಿಸರು ಆದ್ದರಿಂದ ನಿಮ್ಮ ಕಣ್ಣು ಮುಂದೆ ಯಾರೇ ಕಷ್ಟದಲ್ಲಿದ್ದರೂ ಕೂಡಲೇ ಸ್ಪಂದಿಸಿ ಅವರಿಗೆ ಸಹಾಯ ಮಾಡಿ ಎಂದು ಸೂಚಿಸಿದರು.

ಯಾವುದೇ ಘಟನೆಗಳಾದರೂ ಟ್ರಾಫಿಕ್ ಪೊಲೀಸರು ಮೊದಲು ಘಟನೆಗೆ ಸಂಬಂದಪಟ್ಟ ಮಾಹಿತಿ ನೀಡುತ್ತಾರೆ, ಆದ್ದರಿಂದ ನೀವು ಕಾರ್ಯನಿರ್ವಹಿಸುವ ಜಾಗದಲ್ಲಿ ಮೈ ಎಲ್ಲಾ ಕಣ್ಣುಇಟ್ಟುಕೊಂಡು ಕಾರ್ಯನಿರ್ವಹಿಸಿ ಎಂದು ಹೇಳಿದರು. ಟ್ರಾಫಿಕ್ ಪೊಲೀಸ್ ಟೀಂ ಉತ್ತಮವಾಗಿ ಸಹಕಾರ ನೀಡಿ ಒಳ್ಳೆ ಹೆಸರು ಪಡೆದಿದ್ದು ಇದೇ ರೀತಿ ಮುಂದೆಯೂ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಇನ್ಸ್ ಪೆಕ್ಟರ್ ಲೋಕೇಶ್, ಅನಿತಾ ಸೇರಿದಂತೆ ಹಲವು ಸಿಬ್ಬಂದಿಯನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

Related