ಜಂಬೂ ಸವಾರಿ ಗಜಪಡೆ ಕರೆತರಲು ಸಿದ್ದತೆ

ಜಂಬೂ ಸವಾರಿ ಗಜಪಡೆ ಕರೆತರಲು ಸಿದ್ದತೆ

ಮೈಸೂರು : ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಅಗತ್ಯ ಗಜಪಡೆ ಸಿದ್ದಪಡಿಸಲಾಗಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಗ್ಸಾಂಡರ್ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಆನೆಗಳನ್ನು ಯಾವ ರೀತಿ ಇಲ್ಲಿಗೆ ಕರೆತರಬೇಕು, ಯಾವ ಸಿದ್ದತೆ ಮಾಡಬೇಕೆಂಬ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೊರೊನಾ ನಡುವೆ ಯಶಸ್ವಿಯಾಗಿ ಸರಳ ದಸರಾ ಆಚರಣೆಗೆ ಸಿದ್ದತೆ ಮಾಡಿಕೊಳ್ಳುವುದರ ಜೊತೆಗೆ ಗಜಪಡೆಯನ್ನು ಸುರಕ್ಷಿತವಾಗಿ ಕರೆತಂದು ವಾಪಸ್ ಕರೆದೊಯ್ಯುವುದು ಸವಾಲಾಗಿದ್ದು, ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

Related