ರಾಮನವಮಿ ಶುಭಾಶಯ ಕೋರಿದ ಸಿಎಂ

ರಾಮನವಮಿ ಶುಭಾಶಯ ಕೋರಿದ ಸಿಎಂ

ಬೆಂಗಳೂರು, ಏ.2 : ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ರಾಮನವಮಿ ಶುಭಾಶಯ ಕೋರಿದ್ದು, ಜೊತೆಗೆ ಮನೆಯಲ್ಲೇ ಇರುವಂತೆ ಮನವಿ ಕೂಡ ಮಾಡಿದ್ದಾರೆ. ಟ್ವೀಟ್ ಮೂಲಕ ರಾಜ್ಯದ ಜನತೆಗೆ ರಾಮನವಮಿ ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ, ಕರ್ನಾಟಕದ ಜನತೆಗೆ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಪ್ರಭು ಶ್ರೀರಾಮನ ತ್ಯಾಗ ಮತ್ತು ಸ್ಥಿತಪ್ರಜ್ಞತೆ ನಮಗೆಲ್ಲ ಆದರ್ಶವಾಗಲಿ. ಕೊರೊನ ನಿಯಂತ್ರಣಕ್ಕಾಗಿ ಹಿನ್ನಲೆ, ಎಲ್ಲ ರೀತಿಯ ಸಾರ್ವಜನಿಕ, ಧಾರ್ಮಿಕ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾಮನವಮಿ ಆಚರಣೆ ತಮ್ಮ ಮನೆಗೆ ಸೀಮಿತವಾಗಿರಲಿ ಎಂದಿದ್ದಾರೆ. ಪ್ರಭು ಶ್ರೀರಾಮನ ತ್ಯಾಗ ಮತ್ತು ಸ್ಥಿತಪ್ರಜ್ಞತೆ ನಮಗೆಲ್ಲ ಆದರ್ಶವಾಗಲಿ. ಕೊರೊನ ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಸಾರ್ವಜನಿಕ, ಧಾರ್ಮಿಕ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾಮನವಮಿ ಆಚರಣೆ ತಮ್ಮ ಮನೆಗೆ ಸೀಮಿತವಾಗಿರಲಿ ಎಂದು ಕಳಕಳಿಯ ಮನವಿ.

Related