ಸುರೇಶ್ ಕುಮಾರ್ ಮೇಲೆ ಸಿಡಿದೆದ್ದ ಶಾಸಕ

ಸುರೇಶ್ ಕುಮಾರ್ ಮೇಲೆ ಸಿಡಿದೆದ್ದ ಶಾಸಕ

ಚಾಮರಾಜನಗರ: ಮಾಜಿ ಸಚಿವ, ಶಾಸಕ ಪುಟ್ಟರಂಗಶೆಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಸುರೇಶ್ ಕುಮಾರ್ ಅವರು ಕೋವಿಡ್ ಖರ್ಚಿಗಾಗಿ 3 ಕೋಟಿ 11 ಲಕ್ಷ ರೂ ತೆಗೆದುಕೊಂಡಿದ್ದಾರೆ. ಗಣಿ, ಭೂ ವಿಜ್ಞಾನದಲ್ಲೂ ಹಗರಣ ಎಸಗಿದ್ದಾರೆ ಎಂದು ದೂರಿದ್ದಾರೆ.

ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಹೇಳಿದಂತೆ ನಡೆದುಕೊಂಡಿಲ್ಲ. ಹಾಗಿದ್ದಲ್ಲಿ ನೀವು ಯಾಕೆ ಸಚಿರಾಗಿದ್ದೀರಾ ಎಂದು ಪ್ರಶ್ನಿಸಿದ್ದಲ್ಲದೇ ರಾಜಕೀಯ ಮಾಡುವುದು ಬಿಟ್ಟು, ಅಭಿವೃದ್ಧಿ ಮಾಡಿ ಎಂದು ಸಲಹೆ ನೀಡಿದರು.

Related