ತಳಿ ಬಿಜೆಪಿಯಿಂದ ಮತಯಾಚನೆ

ತಳಿ ಬಿಜೆಪಿಯಿಂದ ಮತಯಾಚನೆ

ಬೊಮ್ಮನಹಳ್ಳಿ: ಶಾಸಕ ಎಂ. ಸತೀಶ್ ರೆಡ್ಡಿಯವರ ಋಣ ತೀರಿಸುವ ಸದಾವಕಾಶ ಒದಗಿ ಬಂದಿದೆ ಎಂದು ತಳಿ ವಿಧಾನಸಭಾ ಕೇತ್ರದ ಬಿಜೆಪಿ ಅಧ್ಯಕ್ಷ ನಾಗರಾಜು ನುಡಿದರು.

ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹೊಸೂರು ಹಾಗೂ ಕೃಷ್ಣಗಿರಿ ಜಿಲ್ಲೆಯಿಂದ ವಲಸೆ ಬಂದು ನೆಲೆಸಿರುವ ಮತದಾರರನ್ನು ಭೇಟಿ ಮಾಡಿ, ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿಯವರಿಗೆ ತಮ್ಮ ಅಮೂಲ್ಯವಾದ ಮತ ನೀಡುವಂತೆ ಓಲೈಸಿದರು. ಈ ವೇಳೆ ಮಾತನಾಡಿದ ನಾಗರಾಜುರವರು 2021ನೇ ಸಾರ್ವತ್ರಿಕ ಚುನಾವಣೆ ವೇಳೆ ಶಾಸಕ ಎಂ. ಸತೀಶ್ ರೆಡ್ಡಿಯವರು ತಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಪರ ತಮ್ಮ ನೂರಾರು ಕರ‍್ಯಕರ್ತರನ್ನು ಕರೆ ತಂದು ಪ್ರಚಾರಕ್ಕೆ ಕೈ ಜೋಡಿಸಿದ್ದರು.

ಇಂದು ಅವರ ಚುನಾವಣೆಯಲ್ಲಿ ತಳಿ ವಿಧಾನಸಭಾ ಕ್ಷೇತ್ರದಿಂದ ನೂರಾರು ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ನಾಗೇಶ್‌ರವರ ನೇತೃತ್ವದಲ್ಲಿ ಮತಯಾಚನೆಗೆ ಬಂದಿರುವುದು ಸಂತಸ ತಂದಿದೆ. ಸತೀಶ್ ರೆಡ್ಡಿಯವರ ಅಭಿವೃದ್ದಿ ಕರ‍್ಯಗಳು, ವಲಸಿಗರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅವರ ಗುಣ, ಡಬಲ್ ಇಂಜಿನ್ ಸರ್ಕಾರದ ಯೋಜನೆಗಳನ್ನು ಕಂಡು ಮತ್ತೊಮ್ಮೆ ಎಂ. ಸತೀಶ್ ರೆಡ್ಡಿಯವರಿಗೆ ಮತ ನೀಡುತ್ತಾರೆಂಬ ವಿಶ್ವಾಸ ನನಗಿದೆ ಎಂದು ನುಡಿದರು.

ಇದೇ ವೇಳೆ ಮಾತನಾಡಿದ ನಾಗೇಶ್‌ರವರು ಎಂ. ಸತೀಶ್ ರೆಡ್ಡಿಯವರು ಶಾಸಕರಷ್ಟೇ ಅಲ್ಲದೇ, ಬಿಜೆಪಿ ಪಕ್ಷ ಸಂಘಟನೆಗಾಗಿ, ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸದಾ ಶ್ರಮಿಸುವ ಸಹೃದಯಿ. ಸುಮಾರು 35 ಸಾವಿರಕ್ಕೂ ಹೆಚ್ಚು ತಮಿಳು ವಲಸಿಗರು ಕ್ಷೇತ್ರದಲ್ಲಿದ್ದು, ಅವರನ್ನು ಭೇಟಿ ಮಾಡಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಸತೀಶ್ ರೆಡ್ಡಿಯವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ನುಡಿದರು.

ಈ ಸಂದರ್ಭದಲ್ಲಿ ಪ್ರೇಮ್ ಕುಮಾರ್, ಬಿಜೆಪಿ ನೂರಾರು ಕರ್ಯಕರ್ತರು ಭಾಗವಹಿಸಿದ್ದರು.

Related