ಮಹಾನಾಯಕ ಬಳಕೆಗೆ ಆಕ್ರೋಶ

ಮಹಾನಾಯಕ ಬಳಕೆಗೆ ಆಕ್ರೋಶ

ಪಿರಿಯಾಪಟ್ಟಣ: ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರಿಗೆ ಮಾತ್ರ ಮಹಾನಾಯಕ ಪದ ಹಾಗೂ ಬಿರುದು ಇರುವುದು ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮಗಳು ಮಹಾನಾಯಕ ಎಂಬ ಪದ ಬಳಕೆಯನ್ನು ಸಿಡಿ ವಿಚಾರದಲ್ಲಿ ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಅಶೋಕ್ ಹಾಗೂ ಗೌರವಾಧ್ಯಕ್ಷ ಕೆ ರಂಗಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕೆಗೆ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಮಹಾಮಾರಿ ಕೋವಿಡ್ 19 ಹಾಗೂ ಜ್ವಲಂತ ಸಮಸ್ಯೆಗಳು ಹೆಚ್ಚಾಗಿದ್ದು ಇದರ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ಮಾಡದೆ ಕಳೆದ 20 ದಿನದಿಂದ ಸಿಡಿ ವಿಚಾರವಾಗಿ ಹಾಗೂ ದೇಶಕ್ಕೆ ಸ್ವತಂತ್ರಕ್ಕಾಗಿ ಹೋರಾಡಿದ ಮಹನೀಯರು ಹೆಸರನ್ನು ದುರ್ಬಳಕೆ ಮಾಡಿಕೊಂಡು ಪ್ರಸಾರ ಮಾಡುತ್ತಿರುವುದು ಖಂಡನಿಯ ಎಂದರು.

ಮಾಧ್ಯಮಲೋಕ ಬಡವರ ದೀನದಲಿತರ ಅಲ್ಪಸಂಖ್ಯಾತರ ಹಿಂದುಳಿದ ವರ್ಗಗಳ ಸಮಸ್ಯೆಗಳ ಆಲಿಸಿ ಅವರಿಗೆ ನ್ಯಾಯ ರೂಪಿಸುವಂತಹ ಕೆಲಸ ಮಾಡಬೇಕು ರಾಸಲೀಲೆ ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಹೆಸರಿಗೆ ಮಹಾನಾಯಕ ಎಂದು ಪದ ಬಳಕೆ ಮಾಡುತಿರುವುದು ಸರಿಯಲ್ಲ ಇದು ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹ ಪದ ಬಳಕೆಯಾಗಿದೆ ಇದೇ ರೀತಿ ಮಾಧ್ಯಮಗಳಲ್ಲಿ ಸಿಡಿ ಕೇಸ್ ವಿಚಾರದಲ್ಲಿ ಮಹಾನಾಯಕ ಪದಬಳಕೆ ಮಾಡಿದರೆ ರಾಜ್ಯಾದ್ಯಂತ ಮೂಲನಿವಾಸಿ ಅಂಬೇಡ್ಕರ್ ಸೇನೆ ವತಿಯಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆಂದು ತಿಳಿಸಿದರು.

Related