ನಮ್ಮ ಶಾಸಕರು ಕಾಂಗ್ರೆಸ್‌ ಗೆ ಹೊಗಲ್ಲ: ಸುರೇಶ್ ಬಾಬು

ನಮ್ಮ ಶಾಸಕರು ಕಾಂಗ್ರೆಸ್‌ ಗೆ ಹೊಗಲ್ಲ: ಸುರೇಶ್ ಬಾಬು

ಹಾಸನ,ನ.14: ಲೋಕಸಮರಕ್ಕ ಸಜ್ಜಾಗುತ್ತಿರುವ ಕರ್ನಾಟಕ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೌದು, ಕಾಂಗ್ರೆಸ್‌ ಆಪರೆಷನ್‌ ಹಸ್ತದಲ್ಲಿ ಜೆಡಿಎಸ್‌ ನಾಯಕರು ಸಂಪರ್ಕದಲ್ಲಿದ್ದಾರೆ  ಎಂಬುದು ಮತ್ತು ಸೆರ್ಪಡೆಗೋಳ್ಳುತ್ತಿರುವ ವಿಚಾರ ಎಲ್ಲೆಡೆ ಹರಿದಾಡುತ್ತಿದ್ದು, ಹಾಸನಾಂಬೆ ದರ್ಶನ ಪಡೆದು ಸುದ್ದಿಗಾರೊಂದಿಗೆ ಮಾತಾನಡಿದ ಶಾಸಕ ಶಾಸಕ ಸುರೇಶ್ ಬಾಬು , ಯಾವುದೇ ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಮಾತ್ರ ಶರಣಗೌಡ ವಿರೋವಿದೆ. ಅದು ಬಿಟ್ಟರೆ ಪಕ್ಷದ ಬಗ್ಗೆ ಶರಣಗೌಡ ಕಂದಕೂರುಗೆ ಭಿನ್ನಾಭಿಪ್ರಾಯವಿಲ್ಲ. ಆ ತರಹ ಬೆಳವಣಿಗೆಗಳು ಆಗಲಾರದು. ಯಾವುದೇ ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಸರ್ಕಾರ ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟಿದೆ. ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುವ ಮೂಲಕ ಹಣ ವಸೂಲಿ ಮಾಡಲಾಗಿದೆ ಎಂದು ಕಾಂಗ್ರೆಸ್‌ ವಿರುದ್ದ ಕಿಡಿಕಾರಿದರು.

Related