ಮಹಿಳೆ ಮೇಲೆ ಹಲ್ಲೆ : ಖಂಡನೆ

ಮಹಿಳೆ ಮೇಲೆ ಹಲ್ಲೆ : ಖಂಡನೆ

ಮಧುಗಿರಿ: ತಡಿ ಗ್ರಾಮದ ಪರಿಶಿಷ್ಟ ಜಾತಿಯ ಮಹಿಳೆ ಮನೆಯಲ್ಲಿದ್ದಾಗ ನಾಲ್ಕು ಜನರ ಗುಂಪೊಂದು ತೆರಳಿ ಅವ್ಯಾಚ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ಮಹಿಳೆಯ ರಕ್ಷಣೆಗೆ ಬಂದ ಬಾಮೈದನ ಮೇಲೆ ಗುಂಪು ಮಾರಣಾಂತಿಕವಾಗಿ ಅಲ್ಲೇ ನಡೆಸಿದ ಘಟನೆ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣ ದಾಖಲಿಸಿದ್ದರು ಕೂಡ ಪೊಲೀಸರು ಆರೋಪಿಗಳನ್ನು ಬಂಧಿಸುವಂತೆ ನಾಟಕವಾಡಿ ರಾತ್ರೋರಾತ್ರಿ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬಿಡುಗಡೆ ಮಾಡಿರುವುದನ್ನು ದಲಿತ ಚಲವಾದಿ ಮಹಾಸಂಘ ತಾಲೂಕು ಘಟಕ ಖಂಡಿಸಿದೆ.

ಏಪ್ರಿಲ್ 15 ರ 7ರ ರಾತ್ರಿ ಐಡಿಹಳ್ಳಿ ಹೋಬಳಿ ತಾಡಿ ಗ್ರಾಮದ ನಾಗರಾಜು ವಿಜಯಕುಮಾರ್ ಬಡಕನಹಳ್ಳಿ ಗ್ರಾಮದ ಸುರೇಶ, ತಾತನಹಳ್ಳಿ ಹರೀಶ್ ಎಂಬುವವರು ಹರಿಗಳನ್ನು ಬಡಿಯಲು ಬಂದಿಲ್ಲವೆಂದು ಗ್ರಾಮದ ನಾಗರಾಜು ಮನೆಗೆ ತೆರಳಿ ಸ್ವರ್ಣಮ್ಮ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದಾಗ, ಈ ವೇಳೆ ಅವರ ನೆರವಿಗೆ ಬಂದ ಭಾಮೈದ ನರಸಿಂಹ ಮೂರ್ತಿಯನ್ನು ಎಳೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

Related