ದೀಪದಲ್ಲಿ  ಒಂದಾದ ಚಿಕ್ಕೋಡಿ

  • In State
  • April 6, 2020
  • 460 Views
ದೀಪದಲ್ಲಿ  ಒಂದಾದ ಚಿಕ್ಕೋಡಿ

ಚಿಕ್ಕೋಡಿ, ಏ. 06: ಅಂದಕಾರವನ್ನು ಅಳಿಸಿ ಸುಜ್ಞಾನವೆಂಬ ದೀಪವನ್ನು ಹಚ್ಚಿ ಮಹಾಮಾರಿ ಕೊರೊನಾ ಸುಂಕವನ್ನು ಸುಟ್ಟು ಭಸ್ಮವಾಗಲಿ ಎಂದು ಪ್ರಧಾನಿ ನರೇಂದ್ರ ಕರೆ ನೀಡಿದ ದೀಪ ಪ್ರಜ್ವಲನೆ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಹುತೇಕ ಕಡೆಗಳಲ್ಲಿ ಜನರು ಸರಿಯಾಗಿ 9 ಗಂಟೆಗೆ ತಮ್ಮ ಮನೆಗಳ ಲೈಟ್‌ ಗಳನ್ನು ಬಂದ್ ಮಾಡಿ ಅಂಗಳ ಗ್ಯಾಲರಿ ಗಳಲ್ಲಿ ದೀಪ ಬೇಳಗಿಸಿದರು. ಕೆಲವರು ಮೆನಬತ್ತಿ, ಇನ್ನೂ ಕೆಲವರು ಟಾರ್ಚ ಮತ್ತು ಮೊಬೈಲ್ ಲೈಟ್ ಬೇಳಗಿಸಿದರು.

ಕೆಲಕಡೆ ಯುವಕರು ತಮಟೆ ಬಾರಿಸಿ ಹರ್ಷ ವ್ಯಕ್ತಪಡಿಸಿದರು. ಅದೇ ರೀತಿಯಾಗಿ ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಯಕ್ಷಂಭಾ ಗ್ರಾಮದ ಗ್ರಾಮದೇವರಾದ ಹನುಮಂತ ದೇವರ ದೇವಸ್ಥನದಲ್ಲಿ ತಮ್ಮ ಮಕ್ಕಳೊಂದಿಗೆ ಸೆರಿ ದೀಪ ಹಚ್ಚಿ ನಮ್ಮ ನಾಡಿನ ಜನತೆಯನ್ನು ಕಾಡುತ್ತಿರುವ ಕೊರೊನಾ ಎಂಬ ವೈರಸ್ ಸುಟ್ಟು ಬಸ್ಮವಾಗಲಿ  ಎಂದು ಪ್ರಾರ್ಥನೆಯನ್ನು ಮಾಡಿದರು. ಮತ್ತು ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಬ ಜೊಲೆ ಅವರು  ಕುಟುಂಬ ಸಮೇತ  ಮನೆಯ ಅಂಗಳದಲ್ಲಿ ದೀಪವನ್ನು ಬೇಳಗಿಸಿದರು.

Related