ಕ್ರೀಡಾಪಟುಗಳಿಗೆ ಒಂದು ಲಕ್ಷ ಘೋಷಿಸಿದ ರಾಜ್ಯ ಸರ್ಕಾರ

ಕ್ರೀಡಾಪಟುಗಳಿಗೆ ಒಂದು ಲಕ್ಷ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಟೋಕಿಯೋ ಒಲಂಪಿಕ್ಸ್‍ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಂತಹ ರಾಜ್ಯದ ಮೂರು ಕ್ರೀಡಾಪಟುಗಳಿಗೆ ಹಾಗು ಒಬ್ಬ ತರಬೇತುದಾರರಿಗೆ ತಲಾ 1 ಲಕ್ಷ ಪ್ರೋತ್ಸಾಹ ಧನವನ್ನು ಘೋಷಿಸಲಾಗಿದೆ.

ಅಥಿತಿ ಅಶೋಕ್- (ಗಾಲ್ಫ್), ಫೌದಾ ಮಿರ್ಜಾ- (ಕುದುರೆ ಸವಾರಿ), ಶ್ರೀಹರಿ ನಟರಾಜ್- (ಈಜು) ಹಾಗು ಕ್ರೀಡಾ ತರಬೇತುದಾರ ಅಂಕಿತಾ ಸುರೇಶ್ ಸರ್ಕಾರದಿಂದ ಪ್ರೋತ್ಸಾಹ ಧನ ಪಡೆಯುತ್ತಿರುವ ಕ್ರೀಡಾಪಟುಗಳು.

ಟೋಕಿಯೋ ಒಲಂಪಿಕ್ಸ್ -2020 ರ ಕ್ರೀಡಾಕೂಟದಲ್ಲಿ ರಾಜ್ಯದ ಈ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಿ ಕರ್ನಾಟಕದ ಜನತೆಗೆ ಹೆಮ್ಮೆ ತಂದಿದ್ದು, ಇದರ ಪ್ರತೀಕವಾಗಿ ರಾಜಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಕ್ರೀಡಾಪಟುಗಳನ್ನು ರಾಜ್ಯಪಾಲರು ಸನ್ಮಾನಿಸಲಿದ್ದಾರೆ.

Related