ಅಕ್ರಮ ಮರಳು ತಡೆಯುವಲ್ಲಿ ಅಧಿಕಾರಿಗಳು ಶಾಮೀಲು

ಅಕ್ರಮ ಮರಳು ತಡೆಯುವಲ್ಲಿ ಅಧಿಕಾರಿಗಳು ಶಾಮೀಲು

ದೇವದುರ್ಗ: ತಾಲ್ಲೂಕಿನಲ್ಲಿ ನಡೆಯುವ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ಅಕ್ರಮಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಭೀಮ್ ಆರ್ಮಿ ಸಂಘಟನೆ ಮುಖಂಡರು ಆರೋಪಗಳನ್ನು ಮಾಡಿದ್ದಾರೆ.
ಪೀಠದ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಮರಳು ಸಾಗಾಣಿಕೆಯಲ್ಲಿ ಅಧಿಕಾರಿಗಳು ತೋಡಗಿದ್ದು, ಪ್ರಶ್ನೆ ಕೇಳುವವರಿಗೆ ಹೆದರಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾನೂನು ದಿವಾಳಿ ಮಾಡುವ ಅಧಿಕಾರಿಗಳನ್ನು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಮುಂದಾಗಬೇಕು, ಇಲ್ಲವಾದರೆ ಪದಾಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ಸೇರಿ ಗಬ್ಬೂರು ವ್ಯಾಪ್ತಿಯ ಪಿ ಐ ಕಚೇರಿಯಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಲೂಟಿ ಮಾಡುವವರಿಗೆ ಬೆಂಬಲವಾಗಿದ್ದಾರೆಂದು ಆರೋಪಿಸಿದ್ದಾರೆ.
ಕೋಳುರು ಹನುಮಂತ ಭಂಗಿ ಅವರಿಗಾದ ಗತಿಯೇ ನಿಮಗೂ ಆಗುತ್ತದೆ ಎಂದು ಧಮ್ಕಿ ಹಾಕಿದರು ಪರವಾಗಿಲ್ಲ ನಾವುಗಳು ಅದನ್ನು ಸವಾಲ್ ಆಗಿ ಸ್ವೀಕರಿಸುತ್ತೇವೆ ಎಂದರು. ವ್ಯವಹಾರಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ .ಶಬ್ಬಿರ್ ಗೌರಂಪೇಟ .ದೇವರಾಜ ಅಕ್ಕರಕಿ ,ನಾಗರಾಜ ಮನ್ನಾಪುರಿ ,ಹನುಮಂತ ಪೌಡಿ , ಗೋಕುಲ್ ಸಾಬ್ ಬುವಾಜಿ ಇದ್ದಾರೆ.

Related