ಖಾತೆ ಬಗ್ಗೆ ಅಸಮಾಧಾನವಿಲ್ಲ

ಖಾತೆ ಬಗ್ಗೆ ಅಸಮಾಧಾನವಿಲ್ಲ

ಅಥಣಿ : ಪಟ್ಟಣದಲ್ಲಿ ಇರುವ ಗಚ್ಚಿನ ಮಠಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ, ಶಿವಯೋಗಿ ಮುರಘೇಂದ್ರ ಹಾಗೂ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಒಬ್ಬ ಮಹಿಳೆಯಾಗಿ ನನ್ನ ಕುಟುಂಬವನ್ನು ಹೇಗೆ ನಿರ್ವಹಿಸುತ್ತೇನೊ ಹಾಗೆಯೆ ರಾಜ್ಯದ ಮತ್ತು ರಾಷ್ಟ್ರೀಯ ಮುಖಂಡರು ನನಗೆ ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಜೊತೆಗೆ ರಾಜ್ಯದಲ್ಲಿ ಜನಸೇವೆ ಮಾಡುತ್ತಿದ್ದೇನೆ. ಕರ್ನಾಟಕದ ಜನರು ನನ್ನ ಕುಟುಂಬ ಎಂದು ಭಾವಿಸಿ ಸಮಾಜ ಸೇವೆ ಮಾಡುತ್ತಿದ್ದೇನೆ.

ಒಳ್ಳೆಯ ಕೆಲಸವನ್ನು ಮಾಡುವಾಗ ಅನೇಕ ಜನ ಅದಕ್ಕೆ ಹೆಸರು ಇಡುವವರೂ ಇರುತ್ತಾರೆ. ಅಂತಹ ಜನ ಅದನ್ನು ಮಾಡುತ್ತಿರುವಾಗ ನಾನು ಅದರ ಕಡೆಗೆ ಗಮನ ಕೊಟ್ಟಿಲ್ಲ. ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ನನಗೆ ಅಂತಹ ಪರಿಸ್ಥಿತಿಯು ಬಂದಿಲ್ಲ ನಾನು ಸಮಾಜ ಸೇವೆಗೆ ಬಂದಿರುವೆ ಎಂದರು.

ಮಂತ್ರಿಗಿರಿಯಿಂದ ಇಳಿಸಬೇಕು ಅನ್ನುವ ನಿಟ್ಟಿನಲ್ಲಿ ಕೂಡ ಆರೋಪ ಆಗಿರಬಹುದು. ನಾನು ಯಾರನ್ನೂ ಕೂಡ ಸಾಕ್ಷಿ ಆಧಾರ ಇಲ್ಲದೆ ದೂಷಿಸುವುದಿಲ್ಲ. ನಾನು ಎನಾದರೂ ತಪ್ಪು ಮಾಡಿದ್ದರೆ ದೇವರು ದೊಡ್ಡವನಿದ್ದಾನೆ ಅವನು ನೋಡಿಕೊಳ್ಳುತ್ತಾನೆ. ಆ ದೇವರ ದಯೆಯಿಂದ ಜನರ ಆಶಿರ್ವಾದ ಮತ್ತು ಪ್ರಾಮಾಣಿಕ ಕೆಲಸ ಮಾಡಿರುವುದರಿಂದ ಬಡವರ ಕಣ್ಣು ಒರೆಸಿರುವುದರಿಂದ ನಾನು ಮತ್ತೆ ಎರಡನೇ ಬಾರಿಗೆ ಸಚಿವೆ ಆದೆ. ಯಾರ ಮೇಲೂ ಆರೋಪ ಮಾಡುವುದಿಲ್ಲ  ಅವರನ್ನು ದೇವರು ನೋಡಿಕೊಳ್ಳುತ್ತಾನೆ ಎಂದರು.

 

Related